ಹುಬ್ಬಳ್ಳಿಯಲ್ಲಿ “ಆರ್-ಪಾರ್” ಆದ ಕಬ್ಬಿಣದ ಸರಳು- ವಿಲವಿಲ ಒದ್ದಾಡಿದ ಕಾರ್ಮಿಕ…!

ಹುಬ್ಬಳ್ಳಿ: ನಗರದ ಮಂಟೂರ ರಸ್ತೆಯಲ್ಲಿನ ಕಟ್ಟಡದ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕನೋರ್ವನ ಭುಜದಲ್ಲಿಯೇ ಕಬ್ಬಿಣದ ಸರಳೊಂದು ಸಿಲುಕಿರುವ ಘಟನೆ ನಡೆದಿದೆ.

ಹಸನಸಾಬ ಎಂಬ ಕಾರ್ಮಿಕನೇ ಗಾಯಗೊಂಡಿದ್ದು, ಸರಳು ಸಮೇತ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯನ್ನ ಮುಂದುವರೆಸಿದ್ದಾರೆ. ಕಟ್ಟಡದ ಮೇಲ್ಬಾಗದಲ್ಲಿ ಕಾರ್ಯನಿರ್ವಹಿಸುವ ಸಮಯದಲ್ಲಿ ದುರ್ಘಟನೆ ನಡೆದಿದೆ.
ಭುಜದಿಂದ ಹಾಯ್ದು ಕೈ ಮೂಲ ಹೊರಗೆ ಬಂದಿರುವ ಕಬ್ಬಿಣದ ಸರಳನ್ನ ಹೊರಗೆ ತೆಗೆಯಬೇಕಾಗಿದ್ದು, ವೈದ್ಯರು ಇಂದು ಆಪ್ ರೇಷನ್ ಮಾಡುವ ಸಾಧ್ಯತೆಯಿದೆ.
ಹಸನಸಾಬ ಇದೀಗ ಕಬ್ಬಿಣದ ಸರಳೊಂದಿಗೆ ಚಿಕಿತ್ಸೆ ಪಡೆಯುವಂತಾಗಿದ್ದು, ಯಾವುದೇ ರೀತಿಯ ಪ್ರಾಣಾಪಾಯವಾಗುವ ಸಾಧ್ಯತೆಯಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.