Posts Slider

Karnataka Voice

Latest Kannada News

ಹುಬ್ಬಳ್ಳಿ ಪೊಲೀಸರ ವಾಹನದಲ್ಲಿ ಬುಸು ಬುಸು ನಾಗಪ್ಪ…!

1 min read
Spread the love

ಹುಬ್ಬಳ್ಳಿ: ಖಾಸಗಿ ಬಾಡಿಗೆಯಾಗಿ ಪಡೆದುಕೊಂಡಿದ್ದ ಕಾರಿನ ರಿಪೇರಿ ಮಾಡುವ ಸಮಯದಲ್ಲಿ ನಾಗರಹಾವೊಂದು ಪ್ರತ್ಯಕ್ಷವಾದ ಘಟನೆ ಹುಬ್ಬಳ್ಳಿಯ ಹೊಸೂರಿನ ಶ್ರೀ ಗಾಳಿ ದುರ್ಗಮ ದೇವಸ್ಥಾನದ ಬಳಿಯಲ್ಲಿ ಪತ್ತೆಯಾಗಿದೆ.

ಪೊಲೀಸರು ಬಾಡಿಗೆಗೆ ಪಡೆದಿದ್ದ ಕಾರು ದುರಸ್ತಿಗೆ ಬಂದ ಹಿನ್ನೆಲೆಯಲ್ಲಿ ರಿಪೇರಿಗಾಗಿ ಬಿಡಲಾಗಿತ್ತು. ಮೆಕಾನಿಕ್ ನೋರ್ವ ಎಂಜಿನ್ ನೋಡುವ ಉದ್ದೇಶದಿಂದ ನಾಗರ ಹಾವೊಂದು ಒಮ್ಮೆಲೆ ಬುಸುಗುಟ್ಟಿದೆ. ಇದರಿಂದ ಗಾಬರಿಯಾಗಿ ಮತ್ತೆ ಬಾನಟ್ ಮುಚ್ಚಿದ ಮೆಕಾನಿಕ್, ಹಾವು ಹಿಡಿಯುವವರನ್ನ ಕರೆಸುವ ಯತ್ನ ಮಾಡಿದ್ದಾರೆ.

ಕೆಲ ಸಮಯದ ನಂತರ ಸ್ಥಳಕ್ಕೆ ಬಂದ ಸ್ನೇಕ್ ಸಚಿನ್ ಹಾವನ್ನ ಹಿಡಿದು ಚೀಲದಲ್ಲಿ ಹಾಕಿಕೊಂಡು ಹೋಗಿ, ನಿರ್ಜನ ಪ್ರದೇಶದಲ್ಲಿ ಬಿಟ್ಟರು. ಘಟನೆಯನ್ನ ನೋಡಲು ನೂರಾರು ಜನರು ಜಮಾಯಿಸಿದ್ದರು.

ಸುಮಾರು 19 ಅಡಿಗೂ ಹೆಚ್ಚು ಉದ್ದವಿದ್ದ ಹಾವು ಯಾವ ಸಮಯದಲ್ಲಿ ಕಾರಿನಲ್ಲಿ ಬಂದು ಕುಳಿತಿದೆ ಎಂಬುದು ಗೊತ್ತಾಗಿಲ್ಲ.


Spread the love

Leave a Reply

Your email address will not be published. Required fields are marked *