ಹುಬ್ಬಳ್ಳಿ: ಒಳ್ಳೆಯರಾಗೋಕೆ “ಹಾಕಿದ್ದಾ” ಎಂದು ಮಾಲಾಧಾರಿಗಳನ್ನ ಪ್ರಶ್ನಿಸಿ, ಅಯ್ಯಪ್ಪನ ಮಹಿಮೆ ಹೇಳಿದ ಪೊಲೀಸ್ ಕಮೀಷನರ್…!!!
ಹುಬ್ಬಳ್ಳಿ: ನೀವೇನು ಅಯ್ಯಪ್ಪಸ್ವಾಮಿ ಮಾಲೆಯನ್ನ ಹಾಕಿದ್ದು ಒಳ್ಳೆಯರಾಗೋಕಾ ಅಥವಾ ಬೇರೆನೋ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪ್ರಶ್ನಿಸಿದರು.
ಗಂಭೀರ ಪ್ರಕರಣದಲ್ಲಿ ಆರೋಪಿಗಳಿದ್ದವರ ಪರೇಡ್ ನಡೆಸಿದ ವೇಳೆಯಲ್ಲಿ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ, ಭಾಗವಹಿಸಿದ್ದರು. ಈ ಸಮಯದಲ್ಲಿ ಪೊಲೀಸ್ ಕಮೀಷನರ್ ಏನಂದ್ರು ಎಂಬುದು ಇಲ್ಲಿರುವ ವೀಡೀಯೊದಲ್ಲಿ ನೋಡಬಹುದು.
ಒಳ್ಳೆಯರಾಗಿ ಬಂದರೇ, ರೌಡಿಷೀಟರ್ ತೆಗೆದು ಕೊಡ್ತೇನಿ. ಸಮಾಜದಲ್ಲಿ ಉತ್ತಮರಾಗಿ ಜೀವನ ಮಾಡಿ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕಾಳಜಿವ್ಯಕ್ತಪಡಿಸಿದರು.
