ಹುಬ್ಬಳ್ಳಿ ರೇಲ್ವೆ ಮೈದಾನದಲ್ಲಿ “ಚೇತನ ಹಿರೇಕೆರೂರು” ಮಾಡಿದ್ದೇನು…!

ಹುಬ್ಬಳ್ಳಿ; ಕೊರೋನಾ ಮಹಾಮಾರಿ ಹೆಚ್ಚಾಗುತ್ತಿರುವ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗುತ್ತಿರುವ ಸಮಯದಲ್ಲಿ ಹುಬ್ಬಳ್ಳಿಯ ರೇಲ್ವೆ ಮೈದಾನದಲ್ಲಿ ನಡೆದಿರುವ ಸಹದೇವ ಹಿರೇಕೆರೂರ ಸ್ಮರಣಾರ್ಥ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರತಿಯೊಬ್ಬ ಪ್ರೇಕ್ಷಕರಿಗೂ ಮಾಸ್ಕ್ ವಿತರಣೆ ಮಾಡುವ ಮೂಲಕ, ಚೇತನ ಹಿರೇಕೆರೂರ ಜನಮನ ಸೆಳೆದಿದ್ದಾರೆ.

ಗೋಪನಕೊಪ್ಪದ ಸಿದ್ಧರಾಮೇಶ್ವರ ಸದ್ಭಕ್ತ ಮಂಡಳಿ ಆಯೋಜಿಸಿರುವ ಸಹದೇವ ಹಿರೇಕೆರೂರ ಇವರ ಸ್ಮರಣಾರ್ಥ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವೀರ ಮಾರುತಿ ಕ್ರಿಕೆಟ್ ಕ್ಲಬ್ ಪಂದ್ಯಾವಳಿ ವೀಕ್ಷಿಸಲು ಬಂದಂತಹ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದರು.

ಹು.ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ ಹಿರೇಕರರೂರ, ಸಂಭಾಜಿ ದಳವಿ, ಚೇತನ್ ಹಿರೇಕೆರೂರ, ಸುನೀಲ ದಳವಿ, ದೇವೆಂದ್ರ ಹರಿವಾಣ, ದೀಪಕ ಬೇವಿನಕಟ್ಟಿ, ರಿತೇಶ ಹಿರೇಕೆರೂರ, ಸಹದೇವ , ರೋಹಿತ ಹಾಗೂ ಇತರರು ಉಪಸ್ಥಿತರಿದ್ದರು.