Posts Slider

Karnataka Voice

Latest Kannada News

ಹುಬ್ಬಳ್ಳಿ ಪೊಲೀಸ್ ಠಾಣೆಗಳಲ್ಲಿ ಡೀಲ್: ಆರೋಪಿಗಳನ್ನ ಹಿಡಿದು ಬಿಟ್ಟಿದ್ಯಾರು- ಸ್ಪೋಟಕ ಮಾಹಿತಿ…!

Spread the love

ಹುಬ್ಬಳ್ಳಿ: ಅವಳಿನಗರಕ್ಕೆ ಪೊಲೀಸ್ ಕಮೀಷನರ್ ಲಾಬುರಾಮ್ ಎಂಬ ದಕ್ಷ ಅಧಿಕಾರಿ ಬಂದ ನಂತರ ಕೆಲವು ಪೊಲೀಸರು ‘161’ ಕಡಿಮೆ ಮಾಡಿದ್ದಾರೆಂದು ಹೇಳಲಾಗುತ್ತಿತ್ತು, ಆದರೆ, ಕೆಲವರು ಮಾತ್ರ ತಮ್ಮ ವಾಚಾಳಿತನವನ್ನ ಬಿಡುವುದೇ ಇಲ್ಲವೆಂಬುದಕ್ಕೆ ಸಾಕ್ಷಿಗಳು ವೈರಲ್ ಆಗಿದ್ದು, ಕರ್ನಾಟಕವಾಯ್ಸ್.ಕಾಂಗೆ ಲಭಿಸಿವೆ.

ಹೌದು.. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಐದು ಆರೋಪಿಗಳನ್ನ ಬಂಧನ ಮಾಡಿ, ಯಾವುದೇ ಪ್ರಕರಣವನ್ನೂ ದಾಖಲು ಮಾಡದೇ ಪ್ರತಿಯೊಬ್ಬರಿಂದಲೂ ಹಣವನ್ನ ಪೀಕಲಾಗಿದೆ ಎಂದು ಖಚಿತವಾಗಿ ಹೇಳಲಾಗುತ್ತಿದೆ.

ಈ ಬಗ್ಗೆ ಹಲವು ದಾಖಲೆಗಳು ಕರ್ನಾಟಕವಾಯ್ಸ್.ಗೆ ಲಭಿಸಿದ್ದು, ಒಂದು ಠಾಣೆಯಲ್ಲಿ ಬಂಧಿಸಿದ್ದ ಆರೋಪಿಗಳನ್ನ ಬಿಡಿಸಲು ಮತ್ತೊಂದು ಠಾಣೆಯ ಪೊಲೀಸರು ಹಣದ ವ್ಯವಹಾರ ಮಾಡಿದ್ದಾರೆಂಬುದು ರಹಸ್ಯವಾಗಿ ಉಳಿದಿಲ್ಲ.

ದಕ್ಷತನದಿಂದಲೇ ಜೀವನ ಸಾಗಿಸುತ್ತಿರುವ ಅಧಿಕಾರಿಗಳ ನಡುವೆ ‘161’ ಗಿರಾಕಿಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಪೊಲೀಸ್ ಠಾಣೆಗಳ ಹೆಸರಿಗೆ ಮಸಿ ಬಳಿಯುವ ಪೊಲೀಸರು ಯಾರೂ..? ಎಂಬುದನ್ನ ಕರ್ನಾಟಕವಾಯ್ಸ್.ಕಾಂ ಸಮಗ್ರವಾದ ಮಾಹಿತಿಯೊಂದಿಗೆ ನಾಳೆಗೆ ಈ ಡೀಲ್ ನ್ನ ವಿವರವನ್ನ ನೀಡಲಿದೆ. ನಿರೀಕ್ಷಿಸಿ…


Spread the love

Leave a Reply

Your email address will not be published. Required fields are marked *