ಹುಬ್ಬಳ್ಳಿ “ಪಾರಿಜಾತದಲ್ಲಿ ಕಾಮನಬಿಲ್ಲು”ವಿನ ಪವಾಡ- ಎಲ್ಲಿ ಹಾರಿದವು “ಪಾತರಗಿತ್ತಿ”ಗಳು….!

ಹುಬ್ಬಳ್ಳಿ: ಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ಲತ್ತೆ ಪೆಟ್ಟು ಎಂಬ ಗಾದೆ ಮಾತನ್ನ ಚೂರು ಬದಲಿ ಮಾಡಬೇಕಾಗುವ ಸ್ಥಿತಿ ಕಂಡು ಬರುವಂತಹ ಘಟನೆಯೊಂದು ಸದ್ದಿಲ್ಲದೇ ಮುಚ್ಚಿ ಹೋಗಿದೆ. ಅದಕ್ಕೊಂದು ‘ಇಂಟ್ರೋ’ ಈ ಮಾಹಿತಿ.

ನಗರದಲ್ಲಿ ತನ್ನದೇ ಆದ ರೀತಿಯ ದಂಧೆಯಲ್ಲಿ ವಿಖ್ಯಾತಿ ಪಡೆದಿರುವ ‘ಪಾರಿಜಾತ’ದಲ್ಲಿ ಕಳೆದ ರಾತ್ರಿ ಪುಕ್ಕವನ್ನ ಹುಡುಕಿಕೊಂಡು ಬಂದು, ಪಾತರಗಿತ್ತಿಯನ್ನೂ ಕರೆದುಕೊಂಡು ಬಂದು ಮರಳಿ ಕಳಿಸಲಾಗಿದೆ ಎನ್ನಲಾಗುತ್ತಿದೆ.
ಸಾಕಷ್ಟು ಕಲಸುಮಲಸು ಮಾಡಿಕೊಳ್ಳುವ ಮನುಷ್ಯನೇ ಮುಂದಾಳತ್ವ ವಹಿಸಿದ್ದು, ಸಂಗೊಳ್ಳಿ ರಾಯಣ್ಣನ ಪ್ರತಿಮೆಯ ಸನಿಹದ ಗೋಡೆಗಳಲ್ಲಿ”ಕಾಮನಬಿಲ್ಲು”ವಿನ ಚಿತ್ರ ಕಾಣಿಸಿಕೊಳ್ಳತೊಡಗಿದೆ.
ಪಾರಿಜಾತದಲ್ಲಿ ಮಧುವನ್ನ ಹೀರಲು ಹೋದವರು ವಿದ್ಯಾರ್ಥಿಗಳು ಎಂದೂ ಗೊತ್ತಿದ್ದರೂ, ಮಧು ಸಮೇತ ತಂದು, ತುಪ್ಪ ತಿಂದು ಕಳಿಸಿದ್ದಾರೆನ್ನುವ ಮಾಹಿತಿ ಸಿಕ್ಕಿದ್ದು, ಇದರ ಹಿನ್ನೆಲೆಯಿರುವ ಪ್ರತಿ ಮಾಹಿತಿಯನ್ನೂ ಕರ್ನಾಟಕವಾಯ್ಸ್.ಕಾಂ ಕಲೆ ಹಾಕುತ್ತಿದೆ. ಸಧ್ಯದಲ್ಲೇ ಸತ್ಯದ ಕುರುಹುಗಳು ಹೊರಬೀಳಲಿವೆ.