Posts Slider

Karnataka Voice

Latest Kannada News

ಹುಬ್ಬಳ್ಳಿ: “ವೋಡಾ ಸಿಮ್ ಪೋರ್ಟ್” ಹೆಂಡತಿ ಲಿಂಕ್‌ಗೆ ಗೆಳೆಯ- ಪೆಟ್ರೋಲ್ ಹಾಕಿ ಸುಟ್ಟ ಅಸುರ…!!!

1 min read
Spread the love

ಹೆಂಡತಿಯ ಮೇಲೆ ಕಣ್ಣು ಹಾಕಿದ್ದ ಗೆಳೆಯನನ್ನು

ಪರಲೋಕಕ್ಕೆ ಕಳುಹಿಸಿದ ಸ್ನೇಹಿತ

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಭೀಕರವಾಗಿ ಕೊಲೆಯಾಗಿದ್ದ ವಿಜಯ ಬಸವ ಕೊಲೆಯ ಪ್ರಕರಣವನ್ನು ಭೇದಿಸುವಲ್ಲಿ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಗೆಳೆಯನ ಹೆಂಡತಿಗೆ ಪದೇ ಪದೇ ಫೋನ್ ಮಾಡುತ್ತಿದ್ದ ಎಂಬ ಕಾರಣಕ್ಕೆ ವಿಜಯನ ಕೊಲೆ ನಡೆದಿರುವುದು ತನಿಖೆಯಿಂದ ಬಯಲಾಗಿದೆ.

ಕಮೀಷನರ್ ರೇಣುಕಾ ಸುಕುಮಾರ ಹೇಳಿಕೆ…

ಕೊಲೆಯಾದ ವಿಜಯ ವೊಡಾಫೋನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಸ್ನೇಹಿತ ಅಜರ್ ತನ್ನ ಹೆಂಡತಿಯ ಸಿಮ್ ಪೋರ್ಟ್ ಮಾಡುವ ಸಲುವಾಗಿ ತನ್ನ ಗೆಳೆಯನಾದ ವಿಜಯಗೆ ಹೆಂಡತಿ ನಂಬರ್ ಕೊಟ್ಟಿದ್ದ. ಆದ್ರೆ ಅದನ್ನು ಸುಮ್ಮನೆ ಪೋರ್ಟ್ ಮಾಡೋದು ಬಿಟ್ಟು ಆತನ ಹೆಂಡತಿ ಜೊತೆ ಫೋನ್ ನಲ್ಲಿ ಮಾತುಕತೆ ಆರಂಭಿಸಿದ್ದ. ಹೀಗಾಗಿ ಅಜರ್ ತನ್ನ ಸ್ನೇಹಿತ ವಿಜಯನನ್ನು ಪರಲೋಕಕ್ಕೆ ಕಳುಹಿಸಲು ಸ್ಕೆಚ್ ಹಾಕಿದ್ದ.

ತನ್ನ ಆತ್ಮೀಯ ಸ್ನೇಹಿತನ ಹೆಂಡತಿಯನ್ನ ಅಕ್ಕ-ತಂಗಿಯ ದೃಷ್ಟಿಯಲ್ಲಿ ನೋಡೋದು ಬಿಟ್ಟು ಬೇರೆ ದೃಷ್ಟಿಯಿಂದ ನೋಡಲು ಹೋಗಿದ್ದ ವಿಜಯ ಇದೀಗ ಭೀಕರ ಕೊಲೆಯಾಗಿ ಹೋದ್ರೆ. ಹೆಂಡತಿಯ ಮೇಲೆ ಕಣ್ಣು ಹಾಕಿದ ಸ್ನೇಹಿತನನ್ನು ಕೊಲೆ ಮಾಡಿದ ತಪ್ಪಿಗೆ ಅಜರ್ ಜೈಲು ಪಾಲಾಗಿದ್ದು ದುರಂತವೇ ಸರಿ.


Spread the love

Leave a Reply

Your email address will not be published. Required fields are marked *