ಹುಬ್ಬಳ್ಳಿಯಲ್ಲಿ ಹಣಕ್ಕಾಗಿ ಹೆಣ ಬೀಳಿಸಿದ ಗೆಳೆಯರು…!

ಹುಬ್ಬಳ್ಳಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರು ಕೂಡಿಕೊಂಡು ಗೆಳೆಯನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ಮೀರನಗರದಲ್ಲಿ ನಡೆದಿದೆ.

ಮುಸ್ತಾಕ ಅಲಿ ಅತ್ತಾರ ಎಂಬ ಯುವಕ ಅಜ್ಮೀರನಗರದ ಹೊಸ ಟಾವರ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ, ಈತನ ಗೆಳೆಯ ತೌಸೀಫ ಹಾಗೂ ಮತ್ತೋಬ್ಬ ಹಿಂದಿನಿಂದ ಬಂದು ಚಾಕುವಿನಿಂದ ಹಲವು ಬಾರಿ ಇರಿದಿದ್ದಾರೆ. ಇದರಿಂದ ತೀವ್ರವಾದ ರಕ್ತಸ್ರಾವವಾಗಿತ್ತು.
ತಕ್ಷಣವೇ ಮುಸ್ತಾಕ ಅಲಿ ಅತ್ತಾರನನ್ನ ಕಿಮ್ಸಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಯುವಕ ಸಾವಿಗೀಡಾಗಿದ್ದಾನೆ. ತೀವ್ರವಾದ ರಕ್ತಸ್ರಾವವಾಗಿದ್ದೆ ಸಾವಿಗೆ ಕಾರಣವೆಂದು ಹೇಳಲಾಗಿದೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.