ಹುಬ್ಬಳ್ಳಿ: ಎರಡು ಕಾಲಿಲ್ಲದ ಪೊಲೀಯೊ ಪೀಡಿತನನ್ನ ಹತ್ಯೆ ಮಾಡಿದ “2ಕಾಲು ಕಳೆದುಕೊಂಡಾತ”….

ಹುಬ್ಬಳ್ಳಿ: ನಗರದ ದಿಡ್ಡಿ ಓಣಿಯಲ್ಲಿ ವಿಕಲಚೇತನ ವ್ಯಕ್ತಿಯನ್ನ ದುರಂತವೊಂದರಲ್ಲಿ ಎರಡು ಕಾಲುಗಳನ್ನ ಕಳೆದುಕೊಂಡ ವ್ಯಕ್ತಿಯೋರ್ವ ಹತ್ಯೆ ಮಾಡಿರುವ ಪ್ರಕರಣ ನಡೆದಿದೆ.
ಭಿಕ್ಷುಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಕಿಮ್ಸ್ ಶವಾಗಾರಕ್ಕೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ, ನೀಡಿ ಶವದ ಪರಿಶೀಲನೆ ನಡೆಸಿದ್ದಲ್ಲದೇ ಘಟನಾ ಸ್ಥಳಕ್ಕೂ ಭೇಟಿ
ಮನೆ ಮಾಲೀಕರಿಂದ ಮಾಹಿತಿ ಪಡೆದರು.
ಈ ಕುರಿತು ಕಮೀಷನರ್ ಹೇಳಿಕೆ ನೀಡಿದ್ದಿಷ್ಟು, ನಿನ್ನೆ ರಾತ್ರಿ ಹಳೆ ಹುಬ್ಬಳ್ಳಿಯ ದಿಡ್ಡಿ ಓಣಿಯಲ್ಲಿ ಕೊಲೆ ಆಗಿದೆ.
ಇಬ್ಬರು ಭಿಕ್ಷಕರು ಹೊಡೆದಾಡಿಕೊಂಡಿದ್ದಾರೆ. ಮೈಕ್ ಸ್ಟ್ಯಾಂಡ್ನಿಂದ ಹೊಡೆದ ಪರಿಣಾಮ ರಕ್ತಸ್ರಾವ ಆಗಿದೆ.
ಕೂಡಲೇ ಕಿಮ್ಸ್ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಸಾವಾಗಿದೆ. ಇಬ್ಬರು ವ್ಯಕ್ತಿಗಳು ಭಿಕ್ಷೆ ಬೇಡಿಕೊಂಡಿದ್ದರು.
ಮೃತ ಪೋಲಿಯೋ ದಿಂದ ಕಾಲು ಕಳೆದುಕೊಂಡಿದ್ದ. ಆರೋಪಿ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ. ದಿಡ್ಡಿ ಓಣಿಯಲ್ಲಿ ಪರಿಚಯಸ್ಥರು, ಕುಟುಂಬಸ್ಥರ ಜೊತೆ ವಾಸವಾಗಿದ್ರು.
ಹಬ್ಬದ ಹಿನ್ನೆಲೆ ಉಳಿದವರು ಮನೆಯಲ್ಲಿ ಇರಲಿಲ್ಲ. ಮದ್ಯದ ಅಮಲಿನಲ್ಲಿ ಇಬ್ಬರೂ ಹೊಡೆದಾಡಿಕೊಂಡಿದ್ದರು.
ಮೃತ ವ್ಯಕ್ತಿ ನಿಖಿಲೇಶ ಕುಮಾರ ಬಿಹಾರ ಮೂಲದವನು. ಆರೋಪಿ ನಸೀರ್ ಅಲಿಯಾಸ್ ರಾಜೇಶ್ ಹರ್ಯಾಣದವನು.
ಭಿಕ್ಷೆ ಬೇಡುತ್ತ ಬೇರೆ ಬೇರೆ ಕಡೆ ಅಲೆದಾಡುತ್ತಿದ್ದರು. ಕಳೆದ ಮೂರನಾಲ್ಕು ತಿಂಗಳಿಂದ ಹುಬ್ಬಳ್ಳಿಯಲ್ಲೇ ಇದ್ದರು ಅನ್ನೋ ಮಾಹಿತಿ ಇದೆ.
ಅವರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.