Posts Slider

Karnataka Voice

Latest Kannada News

ಬಣ್ಣ ಕಳಚಿಕೊಂಡಾಕೆಗೆ ಒಂದೀಡಿ ಕುಟುಂಬವೇ ಮರ್ಡರಗೆ ಸಾಥ್ ನೀಡಿತ್ತು…!

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕ್ರೈಂ ಇತಿಹಾಸದಲ್ಲೇ ಎಂದೂ ಕೇಳರಿಯದಂತ ಪ್ರಕರಣದ ಒಂದೊಂದೆ ಎಳೆಗಳು ಬಿಚ್ಚಿಕೊಳ್ಳುತ್ತ ಹೋದಂತೆ, ಹಲವು ಸತ್ಯಗಳು ಹೊರಗೆ ಬಿದ್ದಿವೆ. ರುಂಡ-ಮುಂಡ ಚೆಂಡಾಡಿದ ಪ್ರಕರಣದಲ್ಲಿ ‘ಬಣ್ಣದಾಕೆ’ಗಾಗಿ ಒಂದೀಡಿ ಕುಟುಂಬವೇ ಸಾಥ್ ನೀಡಿದ್ದು ಬಹಿರಂಗಗೊಂಡಿದೆ.

ರಾಕೇಶ ಶೆಟ್ಟಿ ಎಂಬ ಕುಡುಕ ಸಹೋದರನನ್ನ ಕೊಲೆ ಮಾಡಿ ಮುಗಿಸುವಲ್ಲಿ ಈತನ ಸಹೋದರಿ ಶನಾಯ ಕಾಟವೆ ಅಲಿಯಾಸ್ ಸೋನಿ ಕಾಟವೆ ಪಾತ್ರಯಿದೆ ಎಂದು ಗೊತ್ತಾದ ಸಮಯದಲ್ಲಿಯೇ, ಹಂತಕರ ಪೈಕಿ ಒಂದು ಕುಟುಂಬದ ತಮ್ಮ, ತಂದೆ ಕೂಡಾ ಭಾಗಿಯಾಗಿರುವುದು ಪತ್ತೆಯಾಗಿದೆ.

ದೇವರಗುಡಿಹಾಳದಲ್ಲಿ ರುಂಡ ಸಿಕ್ಕ ನಂತರ ಎಲ್ಲರೂ ಹುಬ್ಬೇರಿಸುವಂತೆ ತನಿಖೆ ಮಾಡಿ ಮುಗಿಸಿದ್ದು, ಧಾರವಾಡ ಜಿಲ್ಲಾ ಪೊಲೀಸ್. ಅಷ್ಟೊಂದು ಚಾಣಾಕ್ಷತನದ ತಂಡವನ್ನ ಕಟ್ಟುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಯಶಸ್ವಿಯಾಗಿದ್ದಾರೆ.

ಕಳೆದ ಮೂರು ದಿನದ ಹಿಂದೆ ನಿಯಾಜ ಅಹ್ಮದ ಸೈಪುದ್ದೀನ ಕಟಿಗಾರ, ತೌಸೀಫ ಅಬ್ದುಲರೆಹಮಾನ ಚೆನ್ನಾಪುರ, ಅಲ್ತಾಫ ತಾಜುದ್ದೀನ ಮುಲ್ಲಾ ಹಾಗೂ ಅಮನ ಅಲಿಯಾಸ್ ಮಹ್ಮದ ಉಮರ ಗಿರಣಿವಾಲೆ ಎಂಬುವವರನ್ನ ಬಂಧನ ಮಾಡಲಾಗಿತ್ತು. ಇದೀಗ ಇದೇ ಪ್ರಕರಣದಲ್ಲಿ ಶನಾಯ ಕಾಟವೆ ಸಹಿತ ಮಲೀಕ್, ಫಿರೋಜ್ ಹಾಗೂ ಶೈಪುದ್ದೀನ ಎಂಬಾತನನ್ನ ಬಂಧನ ಮಾಡಲಾಗಿದ್ದು, ಹತ್ಯೆಯಲ್ಲಿ ಎಂಟು ಜನರನ್ನ ಬಂಧನ ಮಾಡಿದಂತಾಗಿದೆ.


Spread the love

Leave a Reply

Your email address will not be published. Required fields are marked *