ಹುಬ್ಬಳ್ಳಿಯ “ಕೆಎಂಸಿRI” ನಿರ್ದೇಶಕ ಹುದ್ದೆ 2 ಕೋಟಿಗೆ ‘ಸೇಲ್’ ಆಗಿತ್ತಾ…. ಕಾಂಗ್ರೆಸ್ ಮುಖಂಡನಿಂದಲೇ ಬಹಿರಂಗ…

ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಕರೆಸಿಕೊಳ್ಳುವ ಕೆಎಂಸಿಯ ನಿರ್ದೇಶಕ ಹುದ್ದೆಗೆ ಎರಡು ಕೋಟಿ ರೂಪಾಯಿ ಕೊಡಿಸಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಕಾರ್ಯದರ್ಶಿ ಆರೋಪ ಮಾಡಿದ್ದು, ಪ್ರಕರಣವನ್ನ ಸಿಬಿಐಗೆ ನೀಡಿ ಎಂದು ಒತ್ತಾಯಿಸಿದ್ದಾರೆ.
ಈ ಪ್ರಕರಣದಲ್ಲಿ ಕೆಪಿಸಿಸಿ ಕಾರ್ಯದರ್ಶಿ ನೂರಅಹ್ಮದ ನದಾಫ ಎಂಬುವವರು ಹಲವು ಆಡೀಯೋ ಮತ್ತು ವೀಡಿಯೋ ವೈರಲ್ ಮಾಡಿದ್ದು, ಅದರಲ್ಲಿನ ಒಂದು ಆಡೀಯೋ ಇಲ್ಲಿದೆ ಕೇಳಿ.
ಕೆಎಂಸಿಆರ್ಐ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ಅವರೊಂದಿಗೆ ಮಾತನಾಡಿರುವ ಆಡೀಯೋ ಇದು ಎಂದು ಹೇಳಲಾಗಿದ್ದು, ಮನುಷ್ಯರಾದವರು ಸತ್ಯದ ಜೊತೆಗೆ ನಿಲ್ಲುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.