ಹುಬ್ಬಳ್ಳಿಯ “ಕೇಂದ್ರಿಯ ಶಾಲೆ”ಯ ‘ಮೂರ್ದಾರಿ’ ವಾಮಾಚಾರ- ಪಾಲಕರು ಹೈರಾಣ…!!!
1 min readಹುಬ್ಬಳ್ಳಿ: ಪ್ರೀತಿಯಿಂದ ಬೆಳೆಸಿದ ಮಕ್ಜಳನ್ನ ಶಾಲೆಗೆ ಕರೆದುಕೊಂಡು ಹೋಗುವ ಪಾಲಕರು ಅಮಾವಾಸ್ಯೆ ಮತ್ತು ಹುಣ್ಣಿಮೆಯ ಮಾರನೇಯ ದಿನ ಹೈರಾಣಾಗುವ ಸ್ಥಿತಿಯನ್ನ ವಾಮಾಚಾರದವರು ಮಾಡುತ್ತಿರುವ ಪ್ರಸಂಗ ಹುಬ್ಬಳ್ಳಿಯ ಕೇಂದ್ರಿಯ ಶಾಲೆ ಬಳಿ ನಡೆಯುತ್ತಿದೆ.
ಅಡಿಕೆಯ ಎಲೆಯಲ್ಲಿ ಲಿಂಬೆಹಣ್ಣು, ಬೂದಗುಂಬಳಕಾಯಿ, ಕುಂಕುಮ, ಅರಿಷಣ ಸೇರಿದಂತೆ ಹಲವು ವಸ್ತುಗಳನ್ನ ಮೂರು ದಾರಿ ಸೇರುವ ರಸ್ತೆಯಲ್ಲಿ ಇಟ್ಟು ಹೋಗುತ್ತಿರುವುದು ಕಂಡು ಬರುತ್ತಿದೆ.
ಈ ಭಾಗದ ಜನರು ಹಾಗೂ ಮಕ್ಕಳನ್ನು ಕರೆದುಕೊಂಡು ಶಾಲೆಗೆ ಬರುವ ಪಾಲಕರು ಹಲವು ಬಾರಿ ಸಂಬಂಧಿಸಿದವರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಇಲ್ಲಿ ಸಿಸಿಟಿವಿಗಳನ್ನ ಅಳವಡಿಸಿ, ಭಯ ಹುಟ್ಟಿಸುವ ಕಿರಾತಕರಿಗೆ ಪೊಲೀಸರೇ ತಕ್ಕ ಪಾಠ ಕಲಿಸಬೇಕಿದೆ.