Posts Slider

Karnataka Voice

Latest Kannada News

8ಕ್ಕೆ ಹಿಡಿದ್ರು.. 13ರ ವರೆಗೆ ಬಿಟ್ರು… ಮತ್ತೆ 18ಕ್ಕೆ ಹಿಡಿದು ಜೈಲಿಗೆ ಕಳಿಸಿದ್ರು: ಕರ್ನಾಟಕವಾಯ್ಸ್.ಕಾಂ ಇಂಪ್ಯಾಕ್ಟ್..

Spread the love

ಹುಬ್ಬಳ್ಳಿ: ನಗರದ  ಕಸಬಾಪೇಟೆ ಪೊಲೀಸ್  ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣವೊಂದನ್ನ ದಾರಿ ತರುವಲ್ಲಿ ಕರ್ನಾಟಕವಾಯ್ಸ್.ಕಾಂ ಯಶಸ್ವಿಯಾಗಿದ್ದು, ಇನ್ನೇನು ಪೊಲೀಸ್ ಕಮೀಷನರ್ ತನಿಖೆ ಮಾಡಿಸಿ, ತಪ್ಪಿತಸ್ಥ ಪೊಲೀಸರಿಗೆ ಕಾನೂನು ಪಾಠ ಮಾಡಲಿದ್ದಾರೆ.

ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಜನ್ನತನಗರದಲ್ಲಿ ನವೆಂಬರ್ 8ರಂದು ರಾತ್ರಿ 1.30ರ ಸುಮಾರಿಗೆ ನಾಲ್ವರು ಆಟೋದಲ್ಲಿ ತಲ್ವಾರ ಹಾಗೂ ಬಡಿಗೆಗಳನ್ನ ಇಟ್ಟುಕೊಂಡು ತಿರುಗಾಡುತ್ತಿದ್ದರು. ಅದೇ ಸಮಯದಲ್ಲಿ ನೈಟ್ ಬೀಟ್ ನಲ್ಲಿದ್ದ ಎಎಸ್ಐ ಕಲ್ಲಾಪುರ ಎಂಬುವವರು ತಪಾಸಣೆ ಮಾಡುವ ವೇಳೆಯಲ್ಲಿ ಆರೋಪಿಗಳು ಪರಾರಿಯಾಗಿದ್ದರು.

ಎಎಸ್ಐ ಮಾತ್ರ ಆಟೋ ಹಾಗೂ ಅದರಲ್ಲಿದ್ದ ತಲ್ವಾರ ಸಮೇತ ಎಲ್ಲವನ್ನೂ ಠಾಣೆಗೆ ತೆಗೆದುಕೊಂಡು ಬಂದಿದ್ದರು. ಇದಾದ ಮೇಲೆ ಪ್ರಕರಣ ದಾಖಲು ಮಾಡದೇ ಎಲ್ಲರನ್ನೂ ಆಟೋದ ಸಮೇತ ಬಿಟ್ಟು ಕಳಿಸಿದ್ದರು. ಈ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ನವೆಂಬರ್ 17ಕ್ಕೆ ಹೊರ ಹಾಕಿದ್ದೆ ತಡ, ನೀರು ಕುಡಿದವರು ಮತ್ತೆ ಆರೋಪಿಗಳನ್ನ ಹಿಡಿದು ಜೈಲಿಗೆ ಕಳಿಸಿದ್ದಾರೆ. ಸತ್ಯವನ್ನ ಒಪ್ಪಿಕೊಂಡಿದ್ದಾರೆ.

ಪಾಪ.. ಠಾಣೆಯ ಅಧಿಕಾರಿ ನವೆಂಬರ್ 17 ರ ರಾತ್ರಿ ಸಿಬ್ಬಂದಿಗಳ ಮುಂದೆ ‘’ನನಗೆ ಯಾರೂ ಏನೂ ಮಾಡೋಕೆ ಆಗಲ್ಲ. ಏನ್ ಮಾಡ್ತೀರಿ… “ ಎಂದು ಮಾನಸಿಕವಾಗಿ ಕುಗ್ಗಿದ ರೀತಿಯಲ್ಲಿ ಅಸಹ್ಯವಾಗಿ ಮಾತಾಡಿ, ಮನಸ್ಸು ಹಗುರ ಮಾಡಿಕೊಂಡಿರುವುದು ಕೂಡಾ ರಹಸ್ಯವಾಗಿ ಉಳಿದಿಲ್ಲ.

ಇನ್ನೇನು ಪ್ರಕರಣದ ಬಗ್ಗೆ ಪೊಲೀಸ್ ಕಮೀಷನರ್ ಹೊಸ ಡಿಸಿಪಿಯವರಿಂದ ತನಿಖೆ ಮಾಡಿಸಲಿದ್ದಾರೆ. ತಲ್ವಾರ ಪ್ರಕರಣದಲ್ಲಿ “ಗಡಿಗೆಯಲ್ಲಿ ನೀರು” ಕುಡಿದವರಿಗೆ “ಏನೂ ಮಾಡೋಕೆ” ಆಗತ್ತೆ ಎಂಬುದನ್ನ ತೋರಿಸಲಿದ್ದಾರೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *