Posts Slider

Karnataka Voice

Latest Kannada News

ದಾವೂದ್, ಮಂಜ್ಯಾ ಸೇರಿ 4ರ ಮೇಲೆ ಗೂಂಡಾ ಆ್ಯಕ್ಟ್, ಜೈಲು: 31 ರೌಡಿಗಳ ಗಡಿಪಾರು- ಕಮೀಷನರ್ ದಿಟ್ಟ ನಿರ್ಧಾರ…

Spread the love

ಅವಳಿ ನಗರದಲ್ಲಿದ್ದ ನಾಲ್ಕು ನಟೋರಿಯಸ್ ರೌಡಿಗಳನ್ನು ಗೂಂಡಾ ಆ್ಯಕ್ಟ್ ಅಡಿಯಲ್ಲಿ ಜೈಲಿಗೆ ಅಟ್ಟಿದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಅವಳಿ ನಗರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ರೌಡಿಸಂ, ಬಡ್ಡಿ ವ್ಯವಹಾರ, ಗಾಂಜಾ ಮಾರಾಟ ಹಾಗೂ ಕೊಲೆ ಯತ್ನದಂತ ಪ್ರಕರಣಗಳಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ತ್ಯ ಹಾಗೂ ಶಾಂತಿಯನ್ನು ಕದಡುತ್ತಿದ್ದ ಆರೋಪದ ಮೇಲೆ ನಗರದ ನಾಲ್ಕು ನಟೋರಿಯಸ್ ರೌಡಿ ಶೀಟರ್’ಗಳನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಜೈಲಿಗೆ ಅಟ್ಟಿದ್ದಾರೆ.

ಅವಳಿ ನಗರದ ಪೊಲೀಸ್ ಕಮಿಷನರ್ ಶಶಿಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಮುಖ್ಯವಾಗಿ ಡ್ರಗ್ಸ್,ರೌಡಿಸಂ,ಬಡ್ಡಿ ದಂದೇ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡು ಎಚ್ಚರಿಕೆಯ ಸಂದೇಶವನ್ನು ರೌಡಿ ಶೀಟರ್’ಗಳಿಗೆ ನೀಡಿದ್ದರು.

ಆದ್ರೂ ಕೆಲವೊಂದಿಷ್ಟು ರೌಡಿಗಳು ಕಮಿಷನರ್’ಗೆ ವಾರ್ನಿಂಗ್ ಕ್ಯಾರೇ ಎನ್ನದೇ ಮತ್ತದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರೋ ಸಾಗರ ಲಕ್ಕುಂಡಿ ಯನ್ನು ಧಾರವಾಡ ಜೈಲಿಗೆ,ಕೇಶ್ವಾಪುರ ಠಾಣೆಯ ರೌಡಿ ಸೈಂಟಿಸ್ಟ್ ಮಂಜ್ಯಾನನ್ನು ಕಲ್ಬುರ್ಗಿ ಜೈಲಿಗೆ,ಟೌನ್ ಪೊಲೀಸ್ ಠಾಣೆಯ ರೌಡಿ ಶೀಟರ್ ದಾವೂದ್ ನದಾಫ್’ನನ್ನು ಮೈಸೂರು ಜೈಲಿಗೆ ಹಾಗೂ ಬೆಂಡಿಗೇರಿ ಠಾಣೆಯ ರೌಡಿ ಲಕ್ಷ್ಮಣ ಅಲಿಯಾಸ್ ಗಬ್ಬ್ಯಾನನ್ನು ಬಳ್ಳಾರಿ ಜೈಲಿಗೆ ಅಟ್ಟಿದ್ದಾರೆ.

ಅಷ್ಟೇ ಅಲ್ಲದೇ ಇನ್ನು ಕೆಲವು ರೌಡಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಮುಂದುವರೆಸುವುದರ ಜೊತೆಗೆ ಸಮಾಜದ ಸ್ವಾಸ್ತ್ಯ ವನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಜೊತೆ ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯವನ್ನು ನಿರ್ವಹಿಸುತ್ತಾ ಇರುತ್ತದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed