Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ 26 ಲಕ್ಷ ರೂ.‌ದರೋಡೆ: ಪೂನಾದ ಧೀರಜ್ ಹೇಳಿದ ಸತ್ಯ…!!!

Spread the love

ಹುಬ್ಬಳ್ಳಿ: ನಗರದ ಹೊಸ ಬಸ್ ನಿಲ್ದಾಣದ ಬಳಿಯಿರುವ ಖಾಸಗಿ ಆಸ್ಪತ್ರೆಯ ಬಳಿ ಕಾರಿನಲ್ಲಿದ್ದ ಪೂನಾ ಮೂಲದ ಗುತ್ತಿಗೆದಾರನಿಂದ 26 ಲಕ್ಷ ರೂಪಾಯಿ ದರೋಡೆ ಮಾಡಿದ್ದು, ಹಾಸನ ಮೂಲದವರು ಎಂಬುದು ಗೊತ್ತಾಗಿದೆ.

Exclusive Video..

ಈ ಬಗ್ಗೆ ಕರ್ನಾಟಕವಾಯ್ಸ್.ಕಾಂ ಗೆ ಗುತ್ತಿಗೆದಾರ ಧೀರಜ್ ಮಾಹಿತಿ ನೀಡಿದ್ದು, ಹಾಸನದಲ್ಲಿ ನಡೆಯುತ್ತಿರುವ ಕೆಲಸಕ್ಕೆ 250 ಕಾರ್ಮಿಕರು ಬೇಕಾಗಿದ್ದರು. ಅವರಿಗೆ ತಲಾ ಹತ್ತು ಸಾವಿರ ಅಡ್ವಾನ್ಸ್ ಕೊಡುವ ಉದ್ದೇಶದಿಂದ ಹಣವನ್ನ ತರಲಾಗಿತ್ತಂತೆ.

ಮೊದಲು ಬಸ್ಸಿನಲ್ಲಿ ಬಂದಿರುವುದಾಗಿ ಹೇಳಿದ್ದ ವಂಚಕರು ನಂತರ ಬೈಕಿನಲ್ಲಿ ಕಂಡು ಬಂದಿದ್ದಾರೆ. ಕಾರಿನ ಬಾಗಿಲಿನಲ್ಲಿ ಹಣದ ಚೀಲ ಹಿಡಿದುಕೊಂಡು ನಿಂತು, ನಂತರ ಮತ್ತೆ ಚೀಲವನ್ನ ಕಾರಿನಲ್ಲಿಡಲಾಗಿದೆ.

ಈ ಸಮಯದಲ್ಲಿ ಬೈಕಿನಲ್ಲಿದ್ದ ಇಬ್ಬರು ಹಣದ ಚೀಲದ ಸಮೇತ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಗೋಕುಲ ರಸ್ತೆ ಪೊಲೀಸ್ ಠಾಣೆಯವರು ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.


Spread the love

Leave a Reply

Your email address will not be published. Required fields are marked *