Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ‘ಲೇಡಿ’ ಕೂಡಿ ಹಾಕಿದ್ದರೂ ಬಂಧನವಾಗದ “ಶಕ್ತಿರಾಜ್ ದಾಂಡೇಲಿ, ರಾಹುಲ ಪ್ರಭು”…!

Spread the love

ಹುಬ್ಬಳ್ಳಿ: ಲಿಂಗರಾಜನಗರದಲ್ಲಿನ ಅಪಾರ್ಟಮೆಂಟಿನಲ್ಲಿ ಮಹಿಳೆಯನ್ನ ಕೂಡಿ ಹಾಕಿ, ಹಲ್ಲೆ ಮಾಡಿದ್ದ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೂ, ಆರೋಪಿಗಳನ್ನ ಬಂಧನ ಮಾಡಿಲ್ಲವೆಂದು ನೊಂದ ಮಹಿಳೆ ಲಕ್ಷ್ಮೀ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಹಲ್ಲೆಗೊಳಗಾದ ಮಹಿಳೆ ತನಗಾದ ಅನ್ಯಾಯವನ್ನ ವಿವರವಾಗಿ ಹೇಳಿದ್ದಲ್ಲದೇ, ಪೊಲೀಸರು ಇಂತವರನ್ನ ಬಂಧನ ಮಾಡಬೇಕೆಂದು ಕೋರಿದ್ರು.

ಪತಿಯೊಂದಿಗೆ ಆಗಮಿಸಿದ್ದ ಲಕ್ಷ್ಮೀ, ಇಂತವರನ್ನ ಸುಮ್ಮನೆ ಬಿಡಬಾರದು. ಇದಕ್ಕೆ ಯಲ್ಲಾಪುರದ ಬಾಲಕೃಷ್ಣ ಪಾಂಡುರಂಗ ನಾಯಕ ಹೇಳಿದ್ದನ್ನ ಶಕ್ತಿರಾಜ ದಾಂಡೇಲಿ, ರಾಹುಲ ಪ್ರಭು ಸೇರಿದಂತೆ 13 ಜನರು ಹಲ್ಲೆ ಮಾಡಿದ್ದಾರೆಂದು ಹೇಳಿದರು.

ಘಟನೆ ನಡೆದು ಮೂರು ದಿನಗಳು ಕಳೆದರೂ ಪೊಲೀಸರು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಮಹಿಳೆ ಪ್ರಶ್ನೆ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಉತ್ತರ ನೀಡಬೇಕಿದೆ.


Spread the love

Leave a Reply

Your email address will not be published. Required fields are marked *