ನಿಮಗೆ ಕಾಯಿಲೆ ಇದೇಯಾ.. ಇಲ್ಲಿಗೆ ಹೋಗಿ ಉಚಿತವಾಗಿ ಚಿಕಿತ್ಸೆ ಕೊಡ್ತಾರೆ..!
ಹುಬ್ಬಳ್ಳಿ: ಯಾವುದೇ ಕಾಯಿಲೆಯಿರಲಿ ಅದಕ್ಕೊಂದು ಔಷಧವನ್ನ ಸಿದ್ಧಪಿಡಿಸಿ ನಿಮಗೆ ಉಚಿತವಾಗಿ ಕೊಡುವ ವ್ಯಕ್ತಿಯನ್ನ ಪರಿಚಯ ಮಾಡುತ್ತಿದ್ದೇವೆ. ಇದನ್ನ ಪೂರ್ಣವಾಗಿ ಓದಿ, ಮಾಹಿತಿ ಪಡೆದು ಅವರನ್ನ ಸಂಪರ್ಕಿಸಿ, ಆರೋಗ್ಯದಿಂದ ಇರಿ.
ಹುಬ್ಬಳ್ಳಿಯ ಹೆಗ್ಗರಿ ಸಮೀಪದ ಬಸವನಗರದ ಗುಡಿಪ್ಲಾಟನಲ್ಲಿರುವ ಆಯುರ್ವೇದ ಚಿಕಿತ್ಸಾಲಯಕ್ಕೆ ಹೋದರೇ ಸಾಕು, ಹಸನ್ಮುಖರಾಗಿ ನಿಮ್ಮನ್ನ ಆಯುರ್ವೇದ ಪಂಡಿತ ಯೋಗಿಂದ್ರ ಬಾಳಕೃಷ್ಣ ಶಿಂಧೆ ಬರಮಾಡಿಕೊಳ್ಳುತ್ತಾರೆ. ನಿಮ್ಮಲ್ಲಿರುವ ಕಾಯಿಲೆಯನ್ನ ಗುಣಪಡಿಸುವ ಜವಾಬ್ದಾರಿಯನ್ನ ಅವರೇ ತೆಗೆದುಕೊಳ್ಳುತ್ತಾರೆ.
ಹೌದು.. ಅವರಲ್ಲಿರುವ ಔಷಧೀಯೇ ಅಂತಹದ್ದು. ವಂಶಪಾರಂಪರೀಕವಾಗಿ ಇದನ್ನ ಮಾಡಿಕೊಂಡು ಬಂದಿರುವ ಇವರು ಲಕ್ಷಾಂತರ ಜನರ ಆರೋಗ್ಯವನ್ನ ಸುಧಾರಿಸಿದ್ದಾರೆ.
ವಾರದ ಏಳೂ ದಿನವೂ ಆರಂಭವಿರುವ ಚಿಕಿತ್ಸಾಲಯ, ಬೆಳಿಗ್ಗೆಯಿಂದಲೇ ಪ್ರಾರಂಭವಾಗಿ ಮಧ್ಯಾಹ್ನ 12.30ರ ವರೆಗೆ ಮತ್ತು ಸಂಜೆ 5ರಿಂದ ರಾತ್ರಿ 10ಗಂಟೆಯವರೆಗೂ ನಡೆಯುತ್ತದೆ.
ನೀವೂ ಒಮ್ಮೆ ಭೇಟಿ ನೀಡಿ, ಆರೋಗ್ಯವನ್ನ ಕಾಪಾಡಿಕೊಳ್ಳಿ. ನಿಮ್ಮ ಕೂಗಳತೆ ದೂರದಲ್ಲೇ ಇರುವುದರಿಂದ ನಿಮಗೆ ಹೋಗಿ ಬರಲು ತೊಂದರೆಯಾಗದು.