Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ತುಂಡಾದ ಹೆಬ್ಬೆಟ್ಟು”- ಯಾರದ್ದು… ಹುಡುಕಾಟ ಆರಂಭಿಸಿದ್ದಾರೆ ಪೊಲೀಸರು…!!!

Spread the love

ಹುಬ್ಬಳ್ಳಿ: ಬಡವರ ಪಾಲಿನ ಸಂಜೀವಿನಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿನ ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ತುಂಡಾದ ಹೆಬ್ಬೆರಳೊಂದು ಪತ್ತೆಯಾದ ಪರಿಣಾಮ ಆಸ್ಪತ್ರೆಗೆ ಬರುವ ಜನರು ಆತಂಕಕ್ಕೀಡಾದ ಘಟನೆ ನಡೆದಿದೆ.

ಇಂದು ಬೆಳಗಿನ ಜಾವ ಈ ಘಟನೆ ಬೆಳಕಿಗೆ ಬಂದಿದ್ದು ಈ ತುಂಡಾದ ಹೆಬ್ಬೆರಳು ಇಲ್ಲಿಗೆ ಹೇಗೆ ಬಂತು, ಇದು ಆಸ್ಪತ್ರೆಗೆ ಬಂದ ರೋಗಿಯದೆ ಅಥವಾ ಬೇರೆ ಯಾರಾದರೂ ಇಲ್ಲಿ ಈ ಹೆಬ್ಬೆರಳನ್ನು ಎಸೆದು ಹೋಗಿದ್ದಾರೆಯೇ ಎಂಬ ಹಲವು ಅನುಮಾನಗಳನ್ನು ಮೂಡಿದೆ, ಇನ್ನು ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ಈ ಬೆರಳು ಸಿಕ್ಕಿರೋದು ಸಾಕಷ್ಟು ಅನುಮಾನ ಮೂಡಿಸಿದೆ.

ಈ ಬಗ್ಗೆ ವಿದ್ಯಾನಗರ ಠಾಣೆಯ ಪೊಲೀಸರು ಈ ಬೆರಳು ಇಲ್ಲಿಗೆ ಹೇಗೆ ಬಂತು ಇದು ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯವೋ ಅಥವಾ ಯಾರಾದರೂ ಇಲ್ಲಿ ತಂದು ಎಸೆದು ಹೋಗಿದ್ದಾರೆಯೋ ಎಂಬ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾರೆ.


Spread the love

Leave a Reply

Your email address will not be published. Required fields are marked *