Posts Slider

Karnataka Voice

Latest Kannada News

ಗಿಳಿಯು ಪಂಜರದೊಳಿಲ್ಲ ರಾಮ.. ರಾಮ…!

Spread the love

ಹುಬ್ಬಳ್ಳಿ: ಆ ಜೀವ ಖಾಕಿಗಳ ಮೇಲೆ ಅದೇಷ್ಟು ಪ್ರೀತಿಯನ್ನ ಹೊಂದಿತ್ತು ಎಂದರೇ, ಅವರು ಬಂದರೇ ಸಾಕು, ತನ್ನೀಡಿ ದೇಹವನ್ನ ಮುದುಡಿಸಿ ಆಲಂಗಿಸುವ ಯತ್ನವನ್ನ ಮಾಡುತ್ತಿತ್ತು. ಬದುಕಿನ ಕೊನೆ ಕ್ಷಣದವರೆಗೂ ಆ ಜೀವ ಹಾಗೇ ಬದುಕಿದ್ದ ಪರಿಣಾಮದಿಂದಲೇ, ಇಡೀ ಪೊಲೀಸ್ ಠಾಣೆಯಲ್ಲಿ ನೀರವಮೌನ ಆವರಿಸಿತ್ತು.

ಹೌದು.. ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಶುಕ್ರವಾರ ರಾತ್ರಿ ಎಂದಿನಂತೆ ಇರಲಿಲ್ಲ. ಅವರಿಗೆ ತಮ್ಮದೇ ಮನೆಯ ಸದಸ್ಯನೋರ್ವ ಕಳೆದು ಹೋದಂತ ಭಾವ ಮೂಡಿತ್ತು. ಅವರೆಲ್ಲರೂ ಸಾಕಿದ ‘ಜಾಕಿ’ ಇನ್ನಿಲ್ಲವಾಗಿದ್ದಾನೆ.

ಗೌರವ ಸೂಚಿಸಿದ ವೀಡಿಯೋ ಇಲ್ಲಿದೆ ನೋಡಿ..

ಪೊಲೀಸ್ ಠಾಣೆಯ ಸಾಕು ಶ್ವಾನ ಸಾವಿಗೀಡಾಗಿದ್ದು ಇನ್ಸಪೆಕ್ಟರ್ ರವಿಚಂದ್ರ ಬಡಪಕ್ಕೀರಪ್ಪನವರ ಸೇರಿದಂತೆ ಠಾಣೆಯ ಪ್ರತಿಯೊಬ್ಬರಿಗೂ ನೋವನ್ನುಂಟು ಮಾಡಿದೆ. ಆ ಪ್ರೀತಿ ಇನ್ನಿಲ್ಲವಾಗಿತ್ತಲ್ಲ ಎಂಬ ನೋವು, ಅವರನ್ನ ಸದಾ ಕಾಡುತ್ತಿದೆ.


Spread the love

Leave a Reply

Your email address will not be published. Required fields are marked *