ಹುಬ್ಬಳ್ಳಿ-ಧಾರವಾಡ ಜನರೇ ಕನಪ್ಯೂಸ್ ಆಗಬೇಡಿ- ರೂಲ್ಸ್ ಲ್ಲಿ ಏನೇನಿದೆ ನೋಡಿ…!

ಧಾರವಾಡ: ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೊರಡಿಸಿರುವ ಆದೇಶದ ಬಗ್ಗೆ ಹಲವರು ಹಲವು ರೀತಿಯಲ್ಲಿ ಗೊಂದಲವನ್ನುಂಟು ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅಸಲಿಯಾಗಿ ಇರೋ ನಿಯಮಗಳ ಬಗ್ಗೆ ಕರ್ನಾಟಕವಾಯ್ಸ್.ಕಾಂ ನಿಮಗೆ ಮಾಹಿತಿ ಕೊಡುತ್ತಿದೆ ನೋಡಿ..

ರಾಜ್ಯ ವಿಪತ್ತು ಪ್ರಾಧಿಕಾರದ ಅಧ್ಯಕ್ಷರು ಆಗಿರುವ ರಾಜ್ಯ ಮುಖ್ಯ ಕಾರ್ಯದರ್ಶಿಗಳು ದಿನಾಂಕ: 21-4-2021 ರ ರಾತ್ರಿ 9 ಗಂಟೆಯಿಂದ ದಿನಾಂಕ: 4-5-2021ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯದಾದ್ಯಂತ ಜಾರಿಯಲ್ಲಿರುವ ಕರ್ಪ್ಯೂ ನಿಯಮ, ಮಾರ್ಗಸೂಚಿಗಳನ್ನು ಉಲ್ಲೇಖಿಸಿ, ಏಪ್ರಿಲ್ 20 ರ ರಾತ್ರಿ ಆದೇಶ ಹೊರಡಿಸಿದ್ದಾರೆ.

1 ರಿಂದ 5 ರವರೆಗಿನ ಪುಟಗಳಲ್ಲಿ ಏಪ್ರಿಲ್ 21 ರಿಂದ ಮೇ 4 ರ ವರೆಗೆ ಎಲ್ಲ ಜಿಲ್ಲೆಗಳಲ್ಲಿ ಯಾವ ಚಟುವಟಿಕೆಗಳಿಗೆ ಅನುಮತಿ ನೀಡಿದೆ ಮತ್ತು ಯಾವ ಚಟುವಟಿಕೆಗಳನ್ನು ನಿರ್ಬಂಧಿಸಿದೆ ಎಂಬುದನ್ನು ತಿಳಿಸಲಾಗಿದೆ.

ಏಪ್ರಿಲ್ 21 ರಿಂದ ಮೇ 4 ರ ವರೆಗೆ ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿ, ದಿನಸಿ ಅಂಗಡಿ, ಹಣ್ಣು, ಹಾಲು, ತರಕಾರಿ ಅಂಗಡಿ ಮತ್ತು ಕಟ್ಟಡ ಕಾಮಗಾರಿಗೆ ಸಂಭಂದಿಸಿದ ಸಿಮೆಂಟ್, ಕಬ್ಬಿಣ, ಕಟ್ಟಡ ನಿರ್ಮಾಣ ಸಲಕರಣೆಗಳ ಅಂಗಡಿ, ಕೃಷಿ ಚಟುವಟಿಕೆಗೆ ಪೂರಕ ಸೇವೆ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಇನ್ನುಳಿದ ಎಲ್ಲವೂಗಳನ್ನ ಬಂದ್ ಮಾಡಲೇಬೇಕು.

ಇಂದು ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಹಲವು ಅಂಗಡಿಗಳನ್ನ ಪೊಲೀಸರು ಬಂದ್ ಮಾಡುತ್ತಿದ್ದಾರೆ. ಅದನ್ನೇ ಕೆಲವರು ಗೊಂದಲ ಮೂಡಿಸುತ್ತಿದ್ದಾರೆ. ಅಸಲಿಗೆ ಆದೇಶ ಪ್ರತಿಯನ್ನ ಸರಿಯಾಗಿ ತಿಳಿದುಕೊಳ್ಳದೇ ಎಲ್ಲರೂ ಅಂಗಡಿಗಳನ್ನ ತೆಗೆದಿದ್ದೆ ಗೊಂದಲಕ್ಕೆ ಕಾರಣವಾಗಿದೆ. ಯಾವುದೇ ಪೊಲೀಸರು ಉದ್ದೇಶಪೂರ್ವಕವಾಗಿ ಬಂದ್ ಮಾಡಿಸುತ್ತಿಲ್ಲವೆನ್ನುವುದನ್ನ ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕಿದೆ.