Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಧಾರವಾಡದ ಐವರು ‘ಗಾಂಜಿಗರ ಬಂಧನ’-ಬೈಕ್-ಗಾಂಜಾ-ಮೊಬೈಲ್ ವಶ

1 min read
Spread the love

ಹುಬ್ಬಳ್ಳಿ: ನೃಪತುಂಗ ಬೆಟ್ಟದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿರುವ ಅಶೋಕನಗರ ಠಾಣೆ ಪೊಲೀಸರು ಐವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಐವರನ್ನ ಧಾರವಾಡ ಹತ್ತಿಗೋಳ ನಿವಾಸಿ ಪರಶುರಾಮ ಬೊಳನ್ನವರ, ಬೂಸಪ್ಪ ಚೌಕ್ ಉಳ್ಳಾಗಡ್ಡಿ ಓಣಿಯ ಬಸಯ್ಯ ಪೂಜಾರ, ಲಕ್ಷ್ಮೀಸಿಂಗನಕೇರಿಯ ಗಣೇಶ ಕಾಕಡೆ, ಎಂ.ಆರ್.ನಗರದ ಭೀಮ ಜಾಡರ ಮತ್ತು ಬೂಸಪ್ಪಚೌಕ ನಿವಾಸಿ ಶಿವಾನಂದ ಕಾಳೆ ಎಂದು ಗುರುತಿಸಲಾಗಿದ್ದು, ಆರೋಪಿತರಿಂದ 190 ಗ್ರಾಂ ಗಾಂಜಾ, ಐದು ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.

ಅಶೋಕನಗರ ಠಾಣೆ ಇನ್ಸಪೆಕ್ಟರ ರವಿಚಂದ್ರ ನೇತೃತ್ವದಲ್ಲಿ ಪಿಎಸೈ ಶ್ರೀದೇವಿ, ಸಿಬ್ಬಂದಿಗಳಾದ ೆಸ್.ಬಿ.ಬೂದಣ್ಣನವರ, ಅಭಯ ಕಟ್ಟಳ್ಳಿ, ಮೈಲಾರಿ ಹಂಚಿನಾಳ, ಡಿ.ಎಸ್.ಪಾಟೀಲ, ಸುಧಾಕರ ನೆಸೂರ ಹಾಗೂ ಗಣಪತಿ ಅದೋದೆ ದಾಳಿಯಲ್ಲಿ ಭಾಗವಹಿಸಿದ್ದರು.

ಬಂಧಿತರೆಲ್ಲರೂ ಧಾರವಾಡದವರಾಗಿದ್ದು, 19 ರಿಂದ 24ವಯಸ್ಸಿನೊಳಗಿನವರಾಗಿದ್ದಾರೆ. ಇವರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.


Spread the love

Leave a Reply

Your email address will not be published. Required fields are marked *