Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಡಿಸಿಪಿ ರಾಮರಾಜನ್ ಬೇಟೆ: 17 ಬೈಕುಗಳು ವಶ.. ನಡೆದದ್ದಾದರೂ ಏನೂ ಗೊತ್ತಾ..!

1 min read
Spread the love

ಹುಬ್ಬಳ್ಳಿ: ಕಾನೂನು ಉಲ್ಲಂಘನೆ ಮಾಡಿ ಬಾರ್ ಆ್ಯಂಡ್ ರೆಸ್ಟೊಂರೆಂಟ್ ನಡೆಸುತ್ತಿದ್ದವರ ಮೇಲೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ ದಕ್ಷ ಅಧಿಕಾರಿಯಾದ ಡಿಸಿಪಿ ರಾಮರಾಜನ್ ದಾಳಿ ಮಾಡಿದ್ದು, ಕಾನೂನು ಲೆಕ್ಕಸಿದೇ ಕುಳಿತವರ 17 ಬೈಕುಗಳನ್ನ ವಶಕ್ಕೆ ಪಡೆದಿದ್ದಾರೆ.

ಕಾನೂನು ಮೀರಿಯೂ ಸಮಯವನ್ನೂ ಮೀರಿ ಕುಳಿತಿದ್ದವರಿಗೆ ಬಿಸಿ ಮುಟ್ಟಿಸಲಾಗಿದ್ದು, ಹುಬ್ಬಳ್ಳಿ ಗೋಕುಲ ರಸ್ತೆಯ ಐ ಕ್ಯೂಬ್ ಬಾರ್ ಆ್ಯಂಡ್ ರೆಸ್ಟೊಂರೆಂಟಿನಲ್ಲಿ.

ಪ್ರತಿ ದಿನವೂ ಸಮಯದ ಬಗ್ಗೆ ಅರಿವೇ ಇಲ್ಲದೇ ತೆರೆಯುತ್ತಿದ್ದನ್ನ ಗಮನಿಸಿರುವ ಡಿಸಿಪಿ ರಾಮರಾಜನ್ ತಮ್ಮ ತಂಡದೊಂದಿಗೆ ದಾಳಿ ಮಾಡಿದ್ದಾರೆ. ಆಗ ಕೆಲವರು ನಾವೂ ಮಂತ್ಲಿ ಕೊಡುತ್ತೇವೆ ಎಂದು ಹೇಳಿದಾಗ, ಅವರಿಗೂ ಡಿಸಿಪಿ ಸರಿಯಾಗಿಯೇ ಪಾಠ ಮಾಡಿದ್ದಾರೆಂದು ಗೊತ್ತಾಗಿದೆ.

ಕಾನೂನು ಪಾಲಕರನ್ನ ಖರೀದಿ ಮಾಡಿದ್ದೇವೆ ಎಂದು ಹೇಳಿಕೊಂಡು ನಡೆಯುತ್ತಿರುವ ಕೆಲವರಿಗೆ ದಕ್ಷ ಅಧಿಕಾರಿಗಳ ನಡೆ, ಭಯವನ್ನ ಹುಟ್ಟಿಸುತ್ತಿದೆ. ಆದರೆ, ಸಾರ್ವಜನಿಕ ವಲಯದಲ್ಲಿ ಇಂತಹ ಅಧಿಕಾರಿಗಳು ಬೇಕು ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.


Spread the love

Leave a Reply

Your email address will not be published. Required fields are marked *