Posts Slider

Karnataka Voice

Latest Kannada News

ಹುಬ್ಬಳ್ಳಿ ವ್ಯಾಪಾರಿಗಳನ್ನ ‘ಬಡಿದು’ ಲಕ್ಷ ಲಕ್ಷ ಲೂಟಿ…

Spread the love

ಕಾರವಾರ: ಉತ್ತರಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಇಲೆಕ್ಟ್ರಿಕ್ ವಸ್ತುಗಳನ್ನ ನೀಡಿ, ಹುಬ್ಬಳ್ಳಿಗೆ ಕಾರಿನಲ್ಲಿ ಬರುತ್ತಿದ್ದ ಇಬ್ಬರ ಮೇಲೆ ಹಲ್ಲೆ ಮಾಡಿ ಲಕ್ಷ ಲಕ್ಷ ದರೋಡೆ ಮಾಡಿ ಹೋಗಿರುವ ಪ್ರಕರಣ ಅಂಕೋಲಾ ತಾಲೂಕಿನ ಮಾಸ್ತಿಕಟ್ಟೆ ಗ್ರಾಮದ ಬಳಿ ಸಂಭವಿಸಿದೆ.


ಹುಬ್ಬಳ್ಳಿಯ ವಿನೋದ ಹಾಗೂ ಕೇವಲಚಂದ ಎಂಬುವರ ಮೇಲೆ ಹಲ್ಲೆ ನಡೆದಿದೆ. ಅಂಕೋಲಾ ಯಲ್ಲಾಪುರ ರಸ್ತೆಯಲ್ಲಿರುವ ಮಾಸ್ತಿಕಟ್ಟೆ ಬಳಿ ಕಾರಿಗೆ ಅಡ್ಡ ಹಾಕಿದ ದುಷ್ಕರ್ಮಿಗಳು, ಇಬ್ಬರನ್ನ ಹೊಡೆದು ಬೆದರಿಸಿದ್ದಾರೆ. ಅಷ್ಟೇ ಅಲ್ಲ, ಅವರ ಬಳಿಯಿದ್ದ ಆರು ಲಕ್ಷ ರೂಪಾಯಿಯನ್ನ ಕಸಿದುಕೊಂಡು ಪರಾರಿಯಾಗಿದ್ದಾರೆ.
ಇಲೆಕ್ಟ್ರಿಕ್ ಸಾಮಗ್ರಿಗಳನ್ನ ವ್ಯಾಪಾರಸ್ಥರಿಗೆ ಕೊಟ್ಟು ಅವರಿಂದ ಹಣ ಪಡೆದು ಮರಳುವಾಗ ಈ ದರೋಡೆ ನಡೆದಿದೆ.
ಸ್ಥಳಕ್ಕೆ ತೆರಳಿದ ಅಂಕೋಲಾ ಪೊಲೀಸ್ ಠಾಣೆ ಇನ್ಸಪೆಕ್ಟರ್ ಸಂತೋಷ ಶೆಟ್ಟಿ ಸ್ಥಳ ಮಹಜರು ಮಾಡಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *