Posts Slider

Karnataka Voice

Latest Kannada News

ಸಿಸಿಬಿ ಪೊಲೀಸರ ಕಾರ್ಯಾಚರಣೆ ಕುಖ್ಯಾತ ಮನೆಗಳ್ಳನ ಬಂಧನ

Spread the love

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ ಸಿಸಿಬಿ ತಂಡವೂ ತಲೆಮರೆಸಿಕೊಂಡು ತಿರುಗುತ್ತಿದ್ದ ಕುಖ್ಯಾತ ಮನೆಗಳ್ಳನನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹಳೇಹುಬ್ಬಳ್ಳಿಯ ಬಾಬಾಜಾನ ಮಹ್ಮದಸಲೀಂ ಸುದರ್ಜಿ ಎಂಬಾತನನ್ನ ಬಂಧನ ಮಾಡಲಾಗಿದ್ದು, ಬಂಧಿತನಿಂದ 1.79.850 ರೂಪಾಯಿ ಮೌಲ್ಯದ 55 ಗ್ರಾಂ ತೂಕದ ಬಂಗಾರ ಹಾಗೂ 190 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನ ವಶಕ್ಕೆ ಪಡೆಯಲಾಗಿದೆ.

ಡಿಸಿಪಿಗಳಾದ ಕೆ.ರಾಮರಾಜನ್ ಹಾಗೂ ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸಪೆಕ್ಟರುಗಳಾದ ಅಲ್ತಾಫ ಮುಲ್ಲಾ ಹಾಗೂ ಭರತರೆಡ್ಡಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಿವರಾಜ ಸೋಗಿ, ನೀಲಗಾರ, ಅನಿಲ ಹುಗ್ಗಿ, ವಿಜಯ ಮರೆಪ್ಪನವರ, ಆರ್.ಎಸ್. ಗುಂಜಾಳ, ಬಸವರಾಜ ಸಣ್ಣಪ್ಪನವರ ಆರೋಪಿಯನ್ನ ಬಂಧನ ಮಾಡಿ, ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡಲು, ಗಾಂಜಾವನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನ ಬಂಧನ ಮಾಡುವಲ್ಲಿ ಘಂಟಿಕೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಸಲ್ಮಾ ಅಲಿಯಾಸ್ ರಾಕೇಶ ಅಲಿಯಾಸ್ ರಾಹುಲ ಜಾಧವ ಎಂಬಾಕೆಯನ್ನ ಬಂಧನ ಮಾಡುವಲ್ಲಿ ಘಂಟಿಕೇರಿ ಠಾಣೆಯ ಮಹಿಳಾ ಮುಖ್ಯ ಪೇದೆ ಎಂ.ಎಸ್.ಮಡಿವಾಳರ ಯಶಸ್ವಿಯಾಗಿದ್ದಾರೆ.

ಬಂಧಿತ ಮಹಿಳೆಯಿಂದ 780 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆಯಲಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮವನ್ನ ಜರುಗಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಂಟಿಕೇರಿ ಠಾಣೆಯ ಇನ್ಸಪೆಕ್ಟರ್ ಜೆ.ಆರ್.ನಿಕ್ಕಂ  ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿತ್ತು.


Spread the love

Leave a Reply

Your email address will not be published. Required fields are marked *