Posts Slider

Karnataka Voice

Latest Kannada News

ಸಜ್ಜನ ರಾಜಕಾರಣಿಯ ಕೇತ್ರದಲ್ಲಿ ಅವಿರೋಧ ಮಾಡುವುದಕ್ಕಾಗಿ ಧಮಕಿ…!

Spread the love

ಪ್ರಮುಖ ವಾರ್ಡುಗಳಲ್ಲಿ ಭಾರತೀಯ ಜನತಾ ಪಕ್ಷದ ಮಾಜಿ ಸದಸ್ಯರೇ ಈ ಬಾರಿ ಅವಿರೋಧವಾಗಿ ಆಯ್ಕೆಯಾಗಬೇಕೆಂಬ ಕನಸು ಕಾಣುತ್ತಿದ್ದು, ಮಾಜಿ ಮುಖಂಡನೋರ್ವ ಇದಕ್ಕೆ ಬೆನ್ನಲಬಾಗಿ ನಿಂತಿದ್ದಾರೆ..

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಯ ಕಾವು ದಿನದ ಪ್ರತಿಕ್ಷಣವೂ ಕಾವೇರುತ್ತಿದ್ದು, ಕೆಲವರು ಕೆಲವು ರೀತಿಯಲ್ಲಿ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದು, ಮೊದಲ ಬಾರಿಗೆ ಬೆದರಿಕೆ ಹಾಕಿ ಚುನಾವಣೆಯಿಂದ ಹಿಂದೆ ಸರಿಸುವ ಪ್ರಯತ್ನಕ್ಕೆ ಕೆಲವರು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕೆಲವು ಬಾರಿ ಸದಸ್ಯರಾಗಿ ಅಧಿಕಾರ  ಅನುಭವಿಸಿರುವವರೇ ಈ ಬಾರಿ ಅವಿರೋಧವಾಗುವ ಕನಸು ಕಾಣುತ್ತಿದ್ದು, ಅದಕ್ಕಾಗಿಯೇ ಕಂಡ ಕಂಡವರಿಗೆ ಧಮಕಿ ಹಾಕುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಸಜ್ಜನ ರಾಜಕಾರಣಿಯ ಕ್ಷೇತ್ರದಲ್ಲಿ ಇಂತಹ ಮಾತುಗಳು ಕೇಳಿ ಬಂದಿರುವುದು ಸೋಜಿಗದ ಸಂಗತಿಯಾಗಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮದೇ ಆದ ವರ್ಚಿಸ್ಸಿನ ಮೇಲೆ ಗೆದ್ದುಕೊಂಡು ಬರುವುದು ಕಡಿಮೆಯಾದಾಗ, ಧಮಕಿಯಂತ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆಂದು ಹೇಳಲಾಗಿದೆ.

ಮಹಾನಗರ ಪಾಲಿಕೆಯ ಚುನಾವಣೆ ನಡೆಯುತ್ತೋ ಇಲ್ಲವೋ ಎಂಬ ಸಂಶಯ ಕಾಡುತ್ತಿರುವಾಗಲೇ, ಅವಿರೋಧವಾಗುವ ಕನಸು ಕಂಡು, ಬೇರೆಯವರು ನಿಲ್ಲದಂತೆ ಮಾಡಲು ಮುಂದಾಗಿರುವುದು ಸಜ್ಜನ ರಾಜಕಾರಣಿಗೆ ಗೊತ್ತಿದ್ದೆ ನಡೆಯುತ್ತಿದೇಯೋ ಎಂದು ಕೆಲವರು ಹೇಳುತ್ತಿದ್ದಾರೆ.

ಅವಳಿನಗರದಲ್ಲಿ ಇಂತಹದಕ್ಕೆ ಅವಕಾಶ ಮಾಡಿಕೊಟ್ಟರೇ, ಮುಂದೊಂದು ದಿನ ರಾಜಕಾರಣ ಮಾಡುವುದು ದುಸ್ತರವಾಗುವುದೆಂಬ ಮಾತುಗಳು ಪ್ರಜ್ಞಾವಂತರಿಂದ ಕೇಳಿ ಬರುತ್ತಿವೆ.


Spread the love

Leave a Reply

Your email address will not be published. Required fields are marked *