Posts Slider

Karnataka Voice

Latest Kannada News

ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಮುಂದಾದ ಕಾಂಗ್ರೆಸ್…!

Spread the love

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದಲ್ಲಿ ಈಗ ಹೊಸ ಸಂಚಲನ ಮೂಡಿದೆ. ಏಕೆಂದರೆ ಯುವನಾಯಕ ರಜತ್ ಉಳ್ಳಾಗಡ್ಡಿಮಠ ಅವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರು ಸೆಂಟ್ರಲ್‌ ವಿಧಾನಸಭಾದ ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಸೆಂಟ್ರಲ್‌ ವಿಧಾನಸಭಾ ಕಾಂಗ್ರೆಸ್‌ ಪ್ರಮುಖ ನಾಯಕರು ಹಾಗೂ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಾ.ಮಹೇಶ್‌ ನಾಲವಾಡ, ಶಂಕರಣ್ಣ ಮುನವಳ್ಳಿ ಅವರು ಪಕ್ಷದ ತೊರೆದು ಬಿಜೆಪಿ ಸೇರಿದರು. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಅಸ್ತಿತ್ವವನ್ನೇ ಕಳೆದುಕೊಂಡಿದೆ ಎಂಬ ಭಾವನೆ ಇಲ್ಲಿನ ಮತದಾರರಲ್ಲಿ ಮೂಡಿತ್ತು. ಆದರೆ, ಈಗ ವಿದ್ಯಾರ್ಥಿ ಸಂಘಟನೆಯ ಮೂಲಕ ತನ್ನದೇ ಆದ ಬಹುದೊಡ್ಡ ಯುವ ಸಮೂಹವನ್ನು, ಯುವ ಪಡೆಯನ್ನು ಹೊಂದಿರುವ ರಜತ್ ಉಳ್ಳಾಗಡ್ಡಿಮಠ ಅವರ ಹೆಗಲಿಗೆ ಪಕ್ಷವನ್ನು ಬೂತ್‌ ಮಟ್ಟದಲ್ಲಿ ಕಟ್ಟುವ ಜವಾಬ್ದಾರಿ ವಹಿಸಿದ್ದು, ಅವರು ಈ ಕಾಯಕವನ್ನು ಸಮರ್ಥವಾಗಿ ಮಾಡುತ್ತಾರೆ ಎಂಬ ವಿಶ್ವಾಸ ಹಾಗೂ ಸಮರ್ಥ ನಾಯಕತ್ವ ಗುಣ ಅವರಲ್ಲಿ ಇದೆ ಎಂಬದನ್ನು ಕಂಡ ಯುವಪಡೆ ಕಾಂಗ್ರೆಸ್‌ನತ್ತ ಮುಖ ಮಾಡುವುದು. ಪಕ್ಷ ಬಲಗೊಳ್ಳುವುದು ಎಂಬ ಆಶಾಭಾವನೆ ಕಾಣತೊಡಗಿದೆ.

ತನ್ನದೆ ಆದ ಸಂಘಟನೆಯ ಮೂಲಕ ಕಳೆದ ಹತ್ತು ವರ್ಷದಿಂದ ವಿದ್ಯಾರ್ಥಿ ಕಾಂಗ್ರೆಸ್‌ ಜಿಲ್ಲಾ ಸಂಯೋಜಕರಾಗಿ, ವಿದ್ಯಾರ್ಥಿ ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕರಾಗಿ, ಹು–ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ, ಕೆಪಿಸಿಸಿ ಸಂಯೋಜಕರಾಗಿ ಪಕ್ಷದ ಹಲವು ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಇರುವ ಯುವಕನಿಗೆ ಸೂಕ್ತ ಜವಾಬ್ದಾರಿಯನ್ನು ಪಕ್ಷ ನೀಡಿದ್ದು ಒಳ್ಳೆಯದು ಎಂದು ಪಕ್ಷದ ಹಲವು ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *