Posts Slider

Karnataka Voice

Latest Kannada News

ಸಿಬ್ಬಂದಿ ಪುತ್ರನಿಂದಲೇ ಹುಬ್ಬಳ್ಳಿಯಲ್ಲಿ ಕಾರು ಕಳ್ಳತನ: ಹೆಡಮುರಿಗೆ ಕಟ್ಟಿದ ಪೊಲೀಸರು…!

1 min read
Spread the love

ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯೋರ್ವನ ಪುತ್ರನಿಂದಲೇ ಕಾರು ಕಳ್ಳತನವಾದ ಪ್ರಕರಣವನ್ನ ಪತ್ತೆ ಹಚ್ಚುವಲ್ಲಿ ನವನಗರದ ಎಪಿಎಂಸಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಂಚಾಕ್ಷರಿನಗರದ ಬಸವಾ ಎಸ್ಟೇಟ್‌ನಲ್ಲಿ ನಿಲ್ಲಿಸಿದ್ದ ಸುನೀತಾ ಎಂಬುವವರಿಗೆ ಸೇರಿದ್ದ ಕಾರು ಕಳ್ಳತನವಾದ ಬಗ್ಗೆ ಶರಣಗೌಡ ಚಂದ್ರಶೇಖರ ಎಂಬುವವರು ದೂರನ್ನ ಸಲ್ಲಿಸಿದ್ದರು.

 

ತನಿಖೆ ಆರಂಭಿಸಿದ ಎಎಸ್ಐ ತಮ್ಮಾಜಿರಾವ ತಲವಾಯಿ ಅವರು, ತಮ್ಮ ಚಾಣಾಕ್ಷತನದಿಂದ ಕಾರನ್ನ ಪತ್ತೆ ಹಚ್ಚಿ, ಮೂವರನ್ನ ಬಂಧನ ಮಾಡಿದ್ದಾರೆ.

ಬಂಧಿತರನ್ನ ನವನಗರದ ಚೇತನ ಸೋಮಶೇಖರ ಗಸ್ತಿ, ಬೈರಿದೇವರಕೊಪ್ಪ ಶಾಂತಿ ಕಾಲನಿಯ ಚೆನ್ನಬಸಪ್ಪ ಅಲಿಯಾಸ್ ಚಂದು ಚೆನ್ನಪ್ಪ ಮಜ್ಜಿಗುಡ್ಡ ಹಾಗೂ ಕಾರು ಖರೀದಿಸಿದ್ದ ಕೇರಳದ ವಿಜೇಶ ಕೆ.ವೆಲ್ಲಾಯುದನ್ ಎಂದು ಗುರುತಿಸಲಾಗಿದೆ.

ಇನ್ಸಪೆಕ್ಟರ್ ಬಿ.ಎಸ್.ಮಂಟೂರ ಮಾರ್ಗದರ್ಶನದಲ್ಲಿ ಎಎಸ್ಐ ಟಿ.ಎಸ್.ತಲವಾಯಿ, ಹೆಡ್‌ಕಾನ್ಸಟೇಬಲ್‌ಗಳಾದ ಜೆ.ಎಸ್.ಹಟ್ಟಿ, ಆರ್.ಟಿ.ರಾಮದುರ್ಗ, ಕಾನ್ಸ್‌ಟೇಬಲ್‌ಗಳಾದ ಆರ್.ಆರ್.ಹೊಸಮನಿ, ಕೆ.ಬಿ.ಬೀರನೂರ, ಎಸ್.ಎಂ.ದಿಡ್ಡಿ, ವಿ.ಬಿ.ಪಾಟೀಲ ಕಾರ್ಯಾಚರಣೆಯಲ್ಲಿದ್ದರು.


Spread the love

Leave a Reply

Your email address will not be published. Required fields are marked *