Posts Slider

Karnataka Voice

Latest Kannada News

ಹುಬ್ಬಳ್ಳಿ: ತಾಯಿಯ ಅಂತ್ಯಸಂಸ್ಕಾರ ಮುಗಿಸಿ ಅಮಿತ ಷಾ ಬಂದೋಬಸ್ತ್‌ಗೆ ಬಂದ “CAR ಡಿಸಿಪಿ”…!!!

Spread the love

ಹುಬ್ಬಳ್ಳಿ: ಹಡೆದವ್ವಳನ್ನ ಕಳೆದುಕೊಂಡ ದುಃಖದಲ್ಲಿಯೂ ಡಿಸಿಪಿಯೋರ್ವರು ಕರ್ತವ್ಯಪ್ರಜ್ಞೆ ಮೆರೆದ ಘಟನೆಯೊಂದು ಇಂದು ಹುಬ್ಬಳ್ಳಿಯಲ್ಲಿ ನಡೆದಿದೆ.

ಸಶಸ್ತ್ರ ಮೀಸಲು ಪಡೆಯ ಡಿಸಿಪಿ ವೈ.ಕೆ.ಕಾಶಪ್ಪನವರ ಎಂಬುವವರೇ ಎಲ್ಲರ ಆದರಕ್ಕೆ ಕಾರಣವಾಗಿದ್ದಾರೆ. ಇಂದು ಬೆಳಗಿನ ಜಾವ ತಾಯಿ ಶಾಂತಮ್ಮ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ವಯೋಸಹಜವಾಗಿ ತೀರಿಕೊಂಡಿದ್ದರು.

ತಾಯಿಯ ಸಾವಿನ ಮಾಹಿತಿ ಸಿಗುತ್ತಿದ್ದ ಹಾಗೇ ಸವದತ್ತಿಗೆ ತೆರಳಿದ ವೈ.ಕೆ.ಕಾಶಪ್ಪನವರ, ತಮ್ಮ ತಾಯಿಯ ಅಂತ್ಯ ಸಂಸ್ಕಾರವನ್ನ ಮಧ್ಯಾಹ್ನದವರೆಗೆ ಮುಗಿಸಿ, ತಕ್ಷಣವೇ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿಯವರ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ, ಕೇಂದ್ರ ಗೃಹ ಸಚಿವ ಅಮಿತ ಷಾ ಅವರ ಕಾರ್ಯಕ್ರಮಕ್ಕೆ ಬಂದೋಬಸ್ತ್ ಮಾಡಿದ್ದಾರೆ.

ಡಿಸಿಪಿಯವರ ಈ ಕಾರ್ಯ ಇಲಾಖೆಯ ಗೌರವ ಹೆಚ್ಚುವಂತೆ ಮಾಡಿದೆ. ಈ ಸಂಬಂಧ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು, ಡಿಸಿಪಿಯವರ ತಾಯಿಯ ಆತ್ಮಕ್ಕೆ ಶಾಂತಿ ಕೋರಿ, ಡಿಸಿಪಿಯವರ ಕರ್ತವ್ಯಪ್ರಜ್ಞೆಯನ್ನ ಕೊಂಡಾಡಿದ್ದಾರೆ.


Spread the love

Leave a Reply

Your email address will not be published. Required fields are marked *