Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಚಾಕುವಿನಿಂದ ಇರಿದು-ಅಪಘಾತವೆಂದು ಕಿಮ್ಸಗೆ ದಾಖಲಿಸಿದ ಭೂಪರು…!

1 min read
Spread the love

ಹುಬ್ಬಳ್ಳಿ: ಕ್ಷುಲಕ ಕಾರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡುವ ಯತ್ನ ನಡೆಸಿ, ಕಿಮ್ಸನಲ್ಲಿ ಅಪಘಾತವೆಂದು ದಾಖಲು ಮಾಡಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ವಿಶ್ವೇಶ್ವರನಗರದ ಹಳೇ ಎಂಪ್ಲಾಮೆಂಟ್ ಕಚೇರಿಯ ಬಳಿಯಲ್ಲಿ ಶಿರಡಿನಗರದ ನಿವಾಸಿ ಮಾರುತಿ ಲಕ್ಕಣ್ಣನವರ ಎಂಬಾತನಿಗೆ ಶಶಿಕುಮಾರ ಎಂಬಾತ ತನ್ನ ಗೆಳೆಯ ಅಮಿತನ ಜೊತೆಗೆ ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಈ ವಿಷಯ ಗೊತ್ತಿದ್ದ ಯಲ್ಲಪ್ಪ ಹಟ್ಟಿ ಎಂಬಾತ, ಗಾಯಾಳು ಮಾರುತಿಯನ್ನ ಕಿಮ್ಸಗೆ ದಾಖಲು ಮಾಡುವಾಗ ಅಪಘಾತವಾಗಿದೆ ಎಂದು ಸುಳ್ಳು ಹೇಳಿದ್ದಾನೆಂದು ಹಲ್ಲೆಗೊಳಗಾದ ಮಾರುತಿಯ ಪತ್ನಿ ದೂರು ದಾಖಲು ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.


Spread the love

Leave a Reply

Your email address will not be published. Required fields are marked *