Posts Slider

Karnataka Voice

Latest Kannada News

ನಾಳೆಯಿಂದ ಹೊಟೇಲ್- ಮಾಂಸಾಹಾರಿ ಪಾರ್ಸಲ್ ಆರಂಭ: ಇವರೆಲ್ಲಿಂದ ತರ್ತಾರೆ ಕಿರಾಣಿ, ಮಾಂಸ…!

Spread the love

ಧಾರವಾಡ: ಜಿಲ್ಲೆಯಲ್ಲಿ ನಾಳೆಯಿಂದ ಹೊಟೇಲ್ ಪಾರ್ಸಲ್ ವ್ಯವಸ್ಥೆಗೆ ಧಾರವಾಡ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ಹೊಟೇಲ್ ನವರು ಕಿರಾಣಿ ಮತ್ತು ಮಾಂಸವನ್ನ ಎಲ್ಲಿಂದ ತರುತ್ತಾರೆಂಬ ಮಿಲಿಯನ್ ಡಾಲರ್ ಪ್ರಶ್ನೆಯನ್ನ ಅವಳಿನಗರದ ಜನರು ಕೇಳುತ್ತಿದ್ದಾರೆ.

ಹೌದು.. ಧಾರವಾಡ ಜಿಲ್ಲೆಯಲ್ಲಿ ಜೂನ್ ಏಳರವರೆಗೆ ಕಿರಾಣಿ ಅಂಗಡಿಯನ್ನ ಮತ್ತೂ ಮಾಂಸದ ಅಂಗಡಿಯನ್ನ ತೆಗೆಯಬಾರದೆಂದು ಜಿಲ್ಲಾಧಿಕಾರಿಗಳು ಆದೇಶವನ್ನ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಮೊನ್ನೆ ಮೂರು ದಿನಗಳ ಅವಕಾಶವನ್ನ ನೀಡಲಾಗಿತ್ತು. ಆಗ್, ಹೊಟೇಲ್ ಗಳಿಗೆ ಯಾವುದೇ ಥರದ ಅವಕಾಶವನ್ನ ನೀಡಿರಲಿಲ್ಲ.

ಈಗ ಜೂನ್ ಒಂದರಿಂದ ಹೊಟೇಲ್ ಬೆಳಿಗ್ಗೆ ಆರರಿಂದ ಎಂಟು ಗಂಟೆಯವರೆಗೆ ಪಾರ್ಸಲ್ ಅವಕಾಶವನ್ನ ನೀಡಲಾಗಿದೆ. ತದನಂತರ ಸಂಜೆ ನಾಲ್ಕರವರೆಗೆ ಆನ್ ಲೈನ್ ಆರ್ಡರ್ ಪಡೆದು, ಮನೆ ಮನೆಗೆ ವಿತರಣೆ ಮಾಡಲು ಅವಕಾಶವನ್ನ ಮಾಡಲಾಗಿದೆ. ಅದೇಲ್ಲವೂ ಓಕೆ.. ಇವರೆಲ್ಲಿಂದ ಹೊಟೇಲ್ ನಡೆಸಲು ವಸ್ತುಗಳನ್ನ ಖರೀದಿ ಮಾಡುತ್ತಾರೆಂಬ ಪ್ರಶ್ನೆ ಪ್ರತಿಯೊಬ್ಬರನ್ನ ಕಾಡುತ್ತಿದೆ.

ಧಾರವಾಡ ಜಿಲ್ಲಾಧಿಕಾರಿಗಳ ಆದೇಶ ಬಹುತೇಕರಿಗೆ ಹಲವು ಪ್ರಶ್ನೆಗಳನ್ನ ಮೂಡಿಸಿದ್ದು, ರೋಗಿಗಳ ಜೊತೆಗಿದ್ದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೊಟೇಲ್ ಪಾರ್ಸಲ್ ಅವಕಾಶ ನೀಡಿದ್ದೇವೆಂದು ಹೇಳಿದ್ದಾರೆ. ಆದರೆ, ಅವರು ರಾತ್ರಿಯ ಊಟವನ್ನ ನಾಲ್ಕು ಗಂಟೆಯವರೆಗೆ ಪಾರ್ಸಲ್ ಪಡೆದುಕೊಳ್ಳಬೇಕಾ ಎಂಬುದು ಕೂಡಾ ಪ್ರಶ್ನೆಯಾಗಿಯೇ ಉಳಿದಿದೆ.


Spread the love

Leave a Reply

Your email address will not be published. Required fields are marked *