ಹೊಸೂರ ರಸ್ತೆಯನ್ನ “ಛಿದ್ರಾವಿದ್ರಿ” ಮಾಡಿದ ಮಹಾನುಭಾವರೂ…!

ಹುಬ್ಬಳ್ಳಿ: ಅವಳಿನಗರವನ್ನ ಸ್ಮಾರ್ಟ್ ಸಿಟಿ ಮಾಡಲು ಹೊರಟಿರುವ ಅಧಿಕಾರಿಗಳು ಪ್ರತಿದಿನ ಒಂದೊಂದು ಪ್ರದೇಶದಲ್ಲಿ ಒಂದಿಲ್ಲಾ ಒಂದು ರಗಳೆಯನ್ನ ಮಾಡಿ, ಜನರ ನೆಮ್ಮದಿಯನ್ನ ಹಾಳು ಮಾಡಲಾಗುತ್ತಿದೆ.
ಹೊಸೂರು ವೃತ್ತದ ಬಳಿಯಿರುವ ಡಿವೈಡರಗಳಲ್ಲಿ ಮಣ್ಣು ಹಾಕಲಾಗಿದ್ದು, ಅದೇಲ್ಲವೂ ರಸ್ತೆಯಲ್ಲಿ ಬಿದ್ದು ಸವಾರರಿಗೆ ತೀವ್ರ ತೊಂದರೆಯಾಗಿದೆ. ರಸ್ತೆಯಲ್ಲಾ ಕೆಂಪಾಗಿದ್ದು, ಸವಾರರು ಹಿಡಿಶಾಪ ಹಾಕುವಂತಾಗಿದೆ.
ಹುಬ್ಬಳ್ಳಿಯ ಸ್ಮಾರ್ಟ್ ಸಿಟಿಯನ್ನಾಗಿ ಮಾಡುವ ಮುನ್ನ ಹಲವು ರಸ್ತೆಗಳು ಹದಗೆಟ್ಟು ಹೋಗುವುದರಲ್ಲಿಯೂ, ಜನರ ಹಾನಿಯಾಗುವುದರಲ್ಲಿಯೂ ತಪ್ಪುವುದಿಲ್ಲ.