ಕುದುರೆಯೇರಿ ಬಂದ ಹುಬ್ಬಳ್ಳಿ ಹೈದರು- ದಂಡದಿಂದ ಪಾರಾಗಲು ಹೊಸ ಐಡಿಯಾ…!
1 min readಹುಬ್ಬಳ್ಳಿ: ಲಾಕ್ ಡೌನ್ ನಿಯಮಾವಳಿಗಳನ್ನ ಮಾಡಿ, ಸಾರ್ವಜನಿಕರಿಂದ ಕೊರೋನಾ ಓಡಿಸಬೇಕೆಂಬ ನಿರ್ಧಾರವನ್ನ ಹೇಗಾದರೂ ಬ್ರೇಕ್ ಮಾಡಬೇಕೆಂಬ ಕೆಲವರ ಹುಚ್ಚಾಟಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇಂದು ಹುಬ್ಬಳ್ಳಿಯಲ್ಲಿ ಅಂತಹದೇ ಘಟನೆಯೊಂದು ನಡೆದಿದೆ.
ಕೆಲವು ದಿನಗಳ ಹಿಂದೆ ಕುಟುಂಬವೊಂದು ಚಕ್ಕಡಿಯಲ್ಲಿ ಬಂದು ಹೋಗಿದ್ದನ್ನ ನೋಡಿದ್ದೇವೆ. ಇಂದು ಇಬ್ಬರು ಯುವಕರು ಕುದುರೆಯನ್ನ ತೆಗೆದುಕೊಂಡು ಬಂದಿದ್ದರು. ಅಷ್ಟೇ ಅಲ್ಲ, ಒಂದೇ ಒಂದು ರೂಪಾಯಿ ದಂಡವನ್ನ ಭರಿಸದೇ ಸಲೀಸಾಗಿ ಹೋಗಿಯೂ ಬಿಟ್ಟರು.
ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..
ಕೊರೋನಾ ಪ್ರಕರಣಗಳು ಕಡಿಮೆಯಾಗಲಿ ಎನ್ನುವುದು ಎಲ್ಲರ ಉದ್ದೇಶವಾಗಿರಬೇಕು. ಅದನ್ನ ಬಿಟ್ಟು ಅದು ಪೊಲೀಸರಿಗಷ್ಟೇ ಎಂದುಕೊಂಡು ತಿರುಗಾಡಿದರೇ, ಲಾಕ್ ಡೌನ್ ದಿನಗಳು ಹೆಚ್ಚುತ್ತಲೇ ಇರುತ್ತವೆ ಎಂಬುದನ್ನ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಿದೆಯಲ್ಲವೇ..