Posts Slider

Karnataka Voice

Latest Kannada News

ನಾನೀಗ ಸದನದ‌ ಹೆಡ್ ಮಾಸ್ಟರ್: ಸಭಾಪತಿ ಬಸವರಾಜ ಹೊರಟ್ಟಿ

1 min read
Spread the love

ಹುಬ್ಬಳ್ಳಿ:  ನಾನು ಈಗ ಸದನದ ಹೆಡ್ ಮಾಸ್ಟರ್ ಆಗಿರುವೆ. ಇನ್ನುಂದೆ ಸದನವನ್ನ ಶಿಸ್ತಿನಿಂದ ಸರಿಯಾಗಿ ನಡೆಸಿಕೊಂಡು ಹೋಗುವೆ. ಮುಂದಿನ ಅಧಿವೇಶನವನ್ನ ಬೆಳಗಾವಿಯ ಸುರ್ವಣ ಸೌಧದಲ್ಲಿ‌ ನಡೆಸುವಂತೆ ಸೂಚಿಸುತ್ತೇನೆ. ಈ‌ ಕುರಿತು ಸರ್ಕಾರದ ಜೊತೆ ಮಾತನಾಡಿ, ಸರ್ಕಾರ ನಿರ್ಧರಿಸಿರೋ ರಾಜ್ಯ ಮಟ್ಟದ ಎಲ್ಲ ಕಚೇರಿಗಳನ್ನ ಸುವರ್ಣ ಸೌಧಕ್ಕೆ ಶಿಫ್ಟ್ ಮಾಡಲು ನಿರ್ದೇಶನ ನೀಡುವೆ. ಬಜೆಟ್ ನಂತರದ ಅಧಿವೇಶನ ಬೆಳಗಾವಿಯಲ್ಲಿ ನಡೆಸುವೆ ಎಂದು ವಿಧಾನ ಪರಿಷತ್ ನ ನೂತನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

https://www.youtube.com/watch?v=NKFCiTSqu2c
ಸಭಾಪತಿ ಬಸವರಾಜ ಹೊರಟ್ಟಿಯವರನ್ನ ತಹಶೀಲ್ದಾರುಗಳಾದ ಶಶಿಧರ ಮಾಡ್ಯಾಳ ಮತ್ತು ಪ್ರಕಾಶ ನಾಶಿ ಹುಬ್ಬಳ್ಳಿಯಲ್ಲಿ ಸ್ವಾಗತಿಸಿದರು..

ಸಭಾಪತಿ ಆದ ನಂತರ ಮೊದಲ‌ ಭಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಬಸವರಾಜ ಹೊರಟ್ಟಿಯವರನ್ನ ಅವರ ಬೆಂಬಲಿಗರು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.

ಹಜರತ್ ಫತೇಶಾವಲಿ ದರ್ಗಾ ದಲ್ಲಿ ಬಸವರಾಜ ಹೊರಟ್ಟಿ ಹಾಗೂ ವಸಂತ ಹೊರಟ್ಟಿ

ಈ ವೇಳೆ ಮಾತನಾಡಿದ ಬಸವರಾಜ ಹೊರಟ್ಡಿ, ಸದನದಲ್ಲಿ ಸವಾಲುಗಳು ಹೆಚ್ಚಾಗಿವೆ. ಜನರ ದುಡ್ಡು ಸರಿಯಾಗಿ ಉಪಯೋಗವಾಗಬೇಕಿದೆ. ಸದನ ಹೇಗೆ ನಡೆಸಬೇಕು ಅನ್ನೋ ಬಗ್ಗೆ ಪ್ರತಿ ವಾರ ಎಲ್ಲ ಪಕ್ಷಗಳ ನಾಯಕರ ಜೊತೆ ಸಭೆ ನಡೆಸುವೆ. ಸಭಾಪತಿಯಾಗಲು ಬಹಳ ಜನ ಹಿಂದೇಟು ಹಾಕ್ತಾರೆ. ಆದ್ರೆ ನಂಗೆ ಬಹಳ ಖುಷಿಯಿದೆ. ಅದನ್ನ ಸಮರ್ಥವಾಗಿ ನಿಭಾಯಿಸುತ್ತನೆ ಎಂದು ಬಸವರಾಜ ಹೊರಟ್ಟಿ ಭರವಸೆ ನೀಡಿದ್ರು.


Spread the love

Leave a Reply

Your email address will not be published. Required fields are marked *