ಪ್ರಲ್ಹಾದ ಜೋಶಿಯವರೇ ಕಣ್ಣು ನೆತ್ತಿಗೇರ್ಯಾವ, ನಾಚಿಗೆ ಆಗಬೇಕು ನಿಮಗೆ: ಎಚ್.ಕೆ.ಪಾಟೀಲ ಕೆಂಡಾಮಂಡಲ…

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಕಣ್ಣು ನೆತ್ತಿಗೇರಿವೆ. ಹೀಗಾಗಿಯೇ ತಮ್ಮ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಬಗ್ಗೆ ಮಾತನಾಡುತ್ತಿದ್ದಾರೆ. ಜೋಶಿಯವರಿಗೆ ನಾಚಿಗೆ ಆಗಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ ಕಿಡಿ ಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಕೆ.ಪಾಟೀಲ ಅವರು, ಜೋಶಿಯವರನ್ನ ತೀವ್ರ ತರಾಟೆಗೆ ತೆಗೆದುಕೊಂಡರು.
ನಾವೂ ಔಟ್ಡೇಟ್ ಅಲ್ಲ. ತಾವೂ ಮಾಡಿರುವ ಪ್ರಮಾದವನ್ನ ಬೇರೆಯವರ ಮೇಲೆ ಹಾಕುವುದು ಸರಿಯಲ್ಲವೆಂದು ಹೇಳಿದರು.