“ಕತ್ಲಲ್ಲಿ ಹಾಯಿಸಿ” ತೀರ್ಲಾಪುರದಲ್ಲಿ ಕಾರಿಟ್ಟು ಬೆಂಗಳೂರಿಗೆ ಪರಾರಿ- ಆರೋಪಿ ಹೆಡಮುರಿಗೆ ಕಟ್ಟಿದ ಪೊಲೀಸ್…!

ಹುಬ್ಬಳ್ಳಿ: ನಗರದ ಕೇಶ್ವಾಪುರದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದು ವೃದ್ಧೆಯ ಸಾವಿಗೆ ಕಾರಣವಾಗಿದ್ದ ಕಾರು ಚಾಲಕ ನಾಪತ್ತೆಯಾಗಿದ್ದ ಪ್ರಕರಣವನ್ನ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕೇಶ್ವಾಪುರದಲ್ಲಿ ಕಳೆದ ಎರಡು ದಿನಗಳ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ, ತೀವ್ರವಾಗಿ ಗಾಯಗೊಂಡಿದ್ದ ನಿರ್ಮಲಾದೇವಿ ಜೈನ್ ಎಂಬ ವೃದ್ಧೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದರು.
ಘಟನೆ ನಡೆದರೂ ಕಾರನ್ನ ನಿಲ್ಲಿಸದೇ ಪರಾರಿಯಾಗಿದ್ದ ಶಾಂತಿನಗರದ ರಾಜೇಶ ಎಂಬಾತ, ಕಾರನ್ನ ನವಲಗುಂದ ತಾಲೂಕಿನ ತೀರ್ಲಾಪುರ ಗ್ರಾಮದಲ್ಲಿ ಕಾರನ್ನ ನಿಲ್ಲಿಸಿ, ಬೆಂಗಳೂರಿಗೆ ಪರಾರಿಯಾಗಿದ್ದ.
ಪೊಲೀಸರು ಖಚಿತ ಮಾಹಿತಿಯನ್ನ ಕಲೆ ಹಾಕಿ, ಆರೋಪಿ ರಾಜೇಶನನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ಕಾರನ್ನ ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.