Posts Slider

Karnataka Voice

Latest Kannada News

ಹಿರೇನರ್ತಿ ಗ್ರಾಪಂ ಸದಸ್ಯನ ಕೊರಳಲ್ಲೂ “ಹುಲಿ ಉಗುರು”…!?

1 min read
Spread the love

ಕುಂದಗೋಳ: ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ ಬಂಧನವಾಗಿ ಬಿಡುಗಡೆಯಾದ ನಂತರವೂ ಹುಲಿ ಉಗುರು ಹಾಕಿಕೊಂಡು ಪೋಸ್ ಕೊಟ್ಟವರ ಸ್ಥಿತಿ, ಅಯೋಮಯವಾಗುತ್ತಿದೆ. ಅಂತಹ ಸಾಲಿಗೆ ಈಗ ಗ್ರಾಮ ಪಂಚಾಯತಿ ಸದಸ್ಯನೋರ್ವ ಬಂದಿದ್ದಾರೆ.

ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮ ಪಂಚಾಯತಿ ಸದಸ್ಯ  ಉಮೇಶ ಸಂಶಿ ಎಂಬುವವರ ಕೊರಳಲ್ಲಿ ಹುಲಿ ಉಗುರು ಥರದ ಪೆಂಡೆಂಟ್ ಕಂಡು ಬಂದಿದ್ದು, ಅವರ ಪೋಟೋ ವೈರಲ್ ಆಗಿದೆ.

ಮೂಲತಃ ಬಸಾಪುರ ಗ್ರಾಮದ ಉಮೇಶ ಅವರು, ಹಾಕಿಕೊಂಡಿರುವ ಪೆಂಡೆಂಟ್ ಹುಲಿ ಉಗುರಾ ಅಥವಾ ಅಲ್ಲವೋ ಎಂಬುದನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ.


Spread the love

Leave a Reply

Your email address will not be published. Required fields are marked *