ಸಂಬಳ ಪಡೆಯುವ ಶಾಲೆಯಲ್ಲಿ “ನೌಕರಿ”- ಶಶಿಕಾಂತ ಬಸಾಪುರಗೆ “ಏನು ಸಮಸ್ಯೆ”…!?
1 min readಧಾರವಾಡ: ಸರಕಾರದ ಕೆಲಸ ದೇವರ ಕೆಲಸ ಎಂಬ ನಾಣ್ಣುಡಿಯನ್ನ ಮರೆಯುವ ಕೆಲವು ಚಾಣಾಕ್ಷರು, ಸರಕಾರದ ಸಂಬಳ ಪಡೆದು ನೌಕರಿಯ ಉದ್ದೇಶ ಮರೆತು ಮೆರೆಯುವುದನ್ನ ರೂಢಿ ಮಾಡಿಕೊಂಡಿದ್ದಾರೆ.
ಇಂತಹದೊಂದು ಘಟನೆಗೆ ಉದಾಹರಣೆಯಾಗಿ ಧಾರವಾಡದ ನವಲೂರ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಶಿಕಾಂತ ಬಸಾಪುರ ಅವರು.
ಮಾನ್ಯರು ಎಷ್ಟು ಮಕ್ಕಳ ಬಗ್ಗೆ ಕಾಳಜಿ ಹೊಂದಿದ್ದಾರೆಂದರೇ, ಹಲವು ವರ್ಷಗಳಿಂದ ಅವರು ಶಾಲೆಗೆ ಹೋಗಿ ಮಕ್ಕಳ ಎದುರಿಗೆ ನಿಂತು ಆಟೋಟವನ್ನೇ ಮಾಡಿಸಿಲ್ಲ. ಆದರೂ, ಅವರನ್ನ ಹುದ್ದೆಯಿಲ್ಲದ ಜಾಗದಲ್ಲಿ ಕೂಡಿಸಿ, ಸಮಯವನ್ನ ಕಳೆಯುತ್ತಿದ್ದಾರೆ.
ಪಾಪ… ಶಶಿಕಾಂತ ಬಸಾಪುರ ಅವರು ಸಂಬಳ ತೆಗೆದುಕೊಳ್ಳುವ ಶಾಲೆಗೆ ಹೋಗಲೇಬಾರದು ಎಂಬ ಉದ್ದೇಶದಿಂದ “ಊರೂರು” ಅಲೆದಾಡಿ ‘ಸರಿ’ ಮಾಡಿಕೊಳ್ಳುವ ಯತ್ನ ನಡೆಸಿದ್ದಾರೆ.
Please prepare proper meaningful sentences other wise do not post like this. I think now days only few peoples reading news paper. Pkease do not torture them