ಧಾರವಾಡದಲ್ಲಿ ನಾಲ್ಕೈದು ರೌಂಡ್ ತಿರುಗಿದ ಹೆಲಿಕ್ಯಾಪ್ಟರ್: ಆತಂಕದಲ್ಲಿ ಹೊರ ಬಂದ ಜನತೆ…!

ಧಾರವಾಡ: ನಗರದ ತಳವಾರ ಓಣಿ, ಕುರುಬರ ಓಣಿ ಹಾಗೂ ಹೊಸಯಲ್ಲಾಪುರದ ಬಳಿಯಲ್ಲಿ ಹೆಲಿಕ್ಯಾಪ್ಟರ್ ವೊಂದು ನಾಲ್ಕೈದು ರೌಂಡ್ ಸುತ್ತಿದ ಪರಿಣಾಮ, ಸಾರ್ವಜನಿಕರು ಆತಂಕದಿಂದ ಮನೆ ಹೊರಗೆ ಬಂದು ನೋಡಿದ ಘಟನೆ ನಡೆದಿದೆ.

ಇದು ಯಾರದ್ದೂ, ಇಲ್ಲೇಕೆ ಹೀಗೆ ತಿರುಗುತ್ತಿದೆ. ಏನಾದರೂ ನಡೀದು ಬಿಟ್ಟಿದೇಯಾ ಎಂಬ ಆತಂಕ ಮನೆ ಮಾಡಿತ್ತು. ಕೆಲವರು ಪರಿಚಯಸ್ಥರಿಗೆ ಕಾಲ್ ಮಾಡಿ, ಇಲ್ಲೇಕೆ ಹೀಗೆ ನಡೆಯುತ್ತಿದೆ ಎಂದು ಚೆಕ್ ಮಾಡಲು ಕೂಡಾ ಹೇಳಿದರು.
ತದನಂತರ ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ತೆಗೆದಿದ್ದು, ನಾಲ್ಕೈದು ರೌಂಡ್ ಸುತ್ತಿದ ಹೆಲಿಕಾಪ್ಟರ್ ನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಹಾಗೂ ಕಾರ್ಯಾಧ್ಯಕ್ಷ ದೃವ ನಾರಾಯಣ ಇದ್ದರು. ಹುಬ್ಬಳ್ಳಿಯಿಂದ ವಿಜಯಪುರದ ಸಿಂದಗಿಗೆ ನಾಮಪತ್ರ ಸಲ್ಲಿಸಲು ಹೊರಟಿದ್ದರು.
ಹೆಲಿಕಾಪ್ಟರ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾಲಿಕತ್ವದ್ದಾಗಿದೆ. ಇದೇಲ್ಲದರ ನಡುವೆ ಹೆಲಿಕಾಪ್ಟರ್ ಧರ್ಮಸಿಂಗ್ ಅವರ ತವರೂರಾದ ನೆಲೋಗಿಯಲ್ಲಿ ಇಳಿಸಲಾಗಿದ್ದು, ಯಾವುದೇ ಥರದ ತೊಂದರೆಯಾಗಿಲ್ಲ. ಆದರೆ, ಧಾರವಾಡದಲ್ಲಿ ನಾಲ್ಕೈದು ರೌಂಡ್ ಹೆಲಿಕಾಪ್ಟರ್ ಹೊಡೆದಿದ್ದು ಯಾಕೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ.