Posts Slider

Karnataka Voice

Latest Kannada News

ಹೆಬ್ಬಳ್ಳಿ ಗ್ರಾಪಂ ಸದಸ್ಯರಿಬ್ಬರ ‘ಮನುಜ ಸೇವೆ’- ತಮ್ಮ ವಾರ್ಡಿನ ಜನರಿಗಾಗಿ ಮಿಡಿದರು…!

Spread the love

ಧಾರವಾಡ: ಕೊರೋನಾ ಸಮಯದಲ್ಲಿ ಪ್ರತಿಯೊಬ್ಬರು ತಮ್ಮಿಂದಾದ ಸಹಕಾರವನ್ನ ಮಾಡುತ್ತಿದ್ದಾರೆ. ಹಾಗೇಯೇ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಸದಸ್ಯರಿಬ್ಬರು ತಮ್ಮ ವಾರ್ಡಿನ ಜನರಿಗಾಗಿ ಮಿಡಿದಿದ್ದಾರೆ.

ಕೇವಲ ಮತ ಪಡೆಯುವುದಷ್ಟೇ ಅಲ್ಲ, ಕಷ್ಟ ಕಾಲದಲ್ಲಿ ಕೈ ಹಿಡಿಯಲು ಸಿದ್ದವೆಂದುಕೊಂಡ 5ನೇ ವಾರ್ಡಿನ ಬಸವರಾಜ ಲಕ್ಕಮ್ಮನವರ, 8ನೇ ವಾರ್ಡಿನ ಬಸವರಾಜ ಹಡಪದ ಅವರು ಕಡು ಬಡವರನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನ ಹಂಚಿದರು.

ತಮ್ಮದೇ ಸ್ವಂತ ಹಣದಲ್ಲಿ ಜನಸೇವೆಗೆ ನಿಂತ ಇಬ್ಬರು ಯುವಕರು ಇತರರಿಗೆ ಮಾದರಿಯಾಗುವಂತೆ ಕೆಲಸ ಮಾಡಿದ್ದಾರೆ. ಗುರುತಿಸಿದ ಕಡು ಬಡವರ ಮನೆ ಮನೆಗೆ ತೆರಳಿ, ಕಿಟ್ ನೀಡಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದು, ದುಡ್ಡು ಮಾಡಿಕೊಳ್ಳುವ ನೀಚತನ ಮಾಡುವ ಮನಸ್ಸುಗಳ ನಡುವೆ, ಇಂತಹ ಮಾನವಂತರು ಇರುವುದು ಜನರ ಗೌರವಕ್ಕೆ ಪಾತ್ರವಾಗಿದೆ.


Spread the love

Leave a Reply

Your email address will not be published. Required fields are marked *