ಹೆಬ್ಬಳ್ಳಿ-ಹುಬ್ಬಳ್ಳಿ ರಸ್ತೆಯಲ್ಲಿ ಅಪಘಾತ: ಹೆಬ್ಬಳ್ಳಿ ಯುವಕನ ಸ್ಥಿತಿ ಗಂಭೀರ, ಇಬ್ಬರು ಪ್ರಾಣಾಪಾಯದಿಂದ ಪಾರು..!
ಹುಬ್ಬಳ್ಳಿ: ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಾಯಗೊಂಡು, ಒಬ್ಬನ ಸ್ಥಿತಿ ಗಂಭೀರವಾದ ಘಟನೆ ಹುಬ್ಬಳ್ಳಿ ಬಳಿಯ ಹೆಬ್ಬಳ್ಳಿ ರಸ್ತೆಯ ಜೈನ್ ಕಾಲೇಜ್ ಬಳಿ ಸಂಭವಿಸಿದೆ.
ಹುಬ್ಬಳ್ಳಿಯಿಂದ ಹೆಬ್ಬಳ್ಳಿ ಗ್ರಾಮಕ್ಕೆ ಹೊರಟಿದ್ದ ಪರಮೇಶ್ವರ ಮೊರಬದ ಹಾಗೂ ಮೌಲಾ ಎಂಬಿಬ್ಬರಿದ್ದ ಬೈಕಿಗೆ ಬಿಜೆಪಿ ಮುಖಂಡರ ಹೊಲದಲ್ಲಿ ಕಾರ್ಯನಿರ್ವಹಿಸುವ ಕೊಂಡಯ್ಯ ಎಂಬಾತನ ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ಹೆಬ್ಬಳ್ಳಿ ಗ್ರಾಮದ ಪರಮೇಶ್ವರ ಮೊರಬದ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ದಾರಿ ಹೋಕರು ಅಂಬ್ಯಲೆನ್ಸಗೆ ಕಾಲ್ ಮಾಡಿ, ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನ ಮಾಡುತ್ತಿದ್ದಾರೆ.
ಘಟನೆಯಲ್ಲಿ ಮೌಲಾ ಹಾಗೂ ಕೊಂಡಯ್ಯ ಎಂಬಾತನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಅವರನ್ನೂ ಕೂಡಾ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗುತ್ತಿದೆ.
ಬಿಜೆಪಿ ಮುಖಂಡರ ಹೊಲದಲ್ಲಿ ಮಷೀನ್ ಆಪ್ ರೇಟಿರ್ ಆಗಿರುವ ಕೊಂಡಯ್ಯ, ತಾನೂ ತಪ್ಪು ಮಾಡಿದಾಗಲೂ ಹಿರಿಯ ಸಚಿವರ ಹೆಸರು ಹೇಳಿ, ಧಮಕಿ ಹಾಕುತ್ತಿದ್ದನೆಂದು ಹೇಳಲಾಗಿದೆ. ಘಟನೆಯು ಉತ್ತರ ಸಂಚಾರಿ ಠಾಣೆ ವ್ಯಾಪ್ತಿಗೆ ಬರುತ್ತಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.