Posts Slider

Karnataka Voice

Latest Kannada News

2017ರ ಬ್ಯಾಚಿನ ಪಿಎಸ್ಐ ಹೃದಯಾಘಾತದಿಂದ ಸಾವು- ಕಾಂಗ್ರೆಸ್ ಶಾಸಕ, ಪುತ್ರನ ಮೇಲೆ PSI ಪತ್ನಿ ಆಕ್ರೋಶ….!!!

1 min read
Spread the love

ತನ್ನ ಪತಿಯ ಸಾವಿಗೆ ಕಾಂಗ್ರೆಸ್ ಶಾಸಕ ಹಾಗೂ ಅವರ ಪುತ್ರ ಕಾರಣ ಎಂದ ಪಿಎಸ್ಐ ಪತ್ನಿ ಶ್ವೇತಾ

ವರ್ಗಾವಣೆಯಾದಾಗ ಇಡೀ ಠಾಣೆಯ ಸಿಬ್ಬಂದಿಗಳು ಹೂಮಳೆ ಸುರಿಸಿದ್ದರು

ಯಾದಗಿರಿ: ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸ್ತಿದ್ದ ಪರಶುರಾಮ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪಿಎಸ್ಐ ಪರಶುರಾಮ್ ಅವರು ನಿನ್ನೆಯಷ್ಟೇ ಯಾದಗಿರಿ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆಗೊಂಡಿದ್ದರು.
ಮೊನ್ನೆ ಸಂಜೆ ವೇಳೆ ನಗರ ಠಾಣೆಯಿಂದ ಹೂವಿನ ಸುರಿಮಳೆಯೊಂದಿಗೆ ಅಭಿಮಾನದ ಬೀಳ್ಕೊಡುಗೆಯನ್ನು ಪರಶುರಾಮ ಪಡೆದಿದ್ದರು. ಆದ್ರೆ ರಾತ್ರಿ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕೊಪ್ಪಳ ಜಿಲ್ಲೆಯವರಾದ ಪರಶುರಾಮ್ 2017 ಬ್ಯಾಚ್ PSI ಆಗಿ ಆಯ್ಕೆಯಾಗಿದ್ದರು. ಯಾದಗಿರಿ ಜಿಲ್ಲೆಯಲ್ಲಿ ಪಿಎಸ್ಐ ಆಗಿ ಉತ್ತಮ ಸೇವೆ ಸಲ್ಲಿಸಿ ಖ್ಯಾತಿ ಗಳಿಸಿದ್ದರು.

ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

ಯಾದಗಿರಿ ಟೌನ ಪಿಎಸೈ ಪರಶುರಾಮ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನ

ಕ್ಷಣಕ್ಷಣಕ್ಕೂ‌ ರೋಚಕತೆ ಪಡೆಯುತ್ತಿರುವ ಪಿಎಸ್ಐ ಸಾವು

ಪಿಎಸ್ಐ ಸಾವಿಗೆ ಸ್ಥಳೀಯ ಶಾಸಕ ಹಾಗೂ ಪುತ್ರನ ಮೇಲೆ ಆರೋಪ

ಶಾಸಕ ಚೆನ್ನಾರೆಡ್ಡಿಗೌಡ ಹಾಗೂ ಪುತ್ರ ಸನ್ನಿ‌ ಮೇಲೆ ಪಿ‌ಎಸ್ಐ ಪತ್ನಿ ಆರೋಪ

ಶಾಸಕ ಹಾಗೂ ಪುತ್ರನ ಮೇಲೆ ದೂರು ನೀಡುವೆ ಎಂದ ಮೃತ ಪಿಎಸ್ಐ ಮಡದಿ ಶ್ವೇತಾ

ನನ್ನ ಗಂಡನ ಸಾವಿಗೆ ಸ್ಥಳೀಯ ಶಾಸಕರೇ ಕಾರಣ ಎಂದು ಆಕ್ರೋಶ

ನನ್ನ ಮಕ್ಕಳನ್ನ ಯಾರು ನೋಡತ್ತಾರೆ ಎಂದು ಮೃತನ ಮಡದಿ‌‌ ಎಸ್ಪಿ ವಿರುದ್ಧ ಅಸಮಾಧಾನ

ನಮ್ಮಗೆ ನ್ಯಾಯ ಸೀಗಬೇಕಾದ್ರೆ ಸ್ಥಳೀಯ ಶಾಸಕನ ಸ್ಥಳಕ್ಕೆ ಕರೆಯವಂತೆ ಪತ್ನಿ ಆಕ್ರೋಶ

ಒಂದೊಂದು ಪೋಸ್ಟ್‌‌ಗೆ ಅಷ್ಟು ದುಡ್ದು ಕೊಡಬೇಕಾದ್ರೆ ಇಲ್ಲದೆ ಇರುವರು ಏನು ಮಾಡಬೇಕು ಎಂದು‌‌ ಶಾಸಕನ ವಿರುದ್ಧ ಪತ್ನಿ ಆಕ್ರೋಶ

ಅಷ್ಟು ಪ್ರಾಮ್ಟ್ ಆಫೀಸರ್ ಹುಡಕಿದ್ರು ಸಿಗಲ್ಲ ಎಂದು ಮಡದಿ ಕೋಪ

ಸನ್ನಿಗೌಡ ಏನ‌ ಮಾಡ್ದ , ಎಂಎಲ್ಎ ಮಗ್ ಏನ್ ಮಾಡ್ದ ನನ್ನ ಪ್ರಾಣ ತಿಂದ ಬಿಟ್ಟರಲ್ಲ‌‌ ಸರ್…. ಶಾಸಕನ ಪುತ್ರನ ವಿರುದ್ದ ಪಿಎಸ್ಐ ಪತ್ನಿ ಆರೋಪ

ಎಲ್ಲರೂ ಐವತ್ತು ಐವತ್ತು ಲಕ್ಷ ಕೊಡಿ ನನ್ನ ಮಕ್ಕಳನ್ನ ಸಾಕಬೇಕು ಎಂದು ಎಸ್ ಪಿ ವಿರುದ್ಧ ಪತ್ನಿ ಶ್ವೇತಾ ಆಕ್ರೋಶ


Spread the love

Leave a Reply

Your email address will not be published. Required fields are marked *