ಧಾರವಾಡ: ನಿಖಾಃ ಓದಿಸುತ್ತಿದ್ದಾಗಲೇ ಹೃದಯಾಘಾತ- ಇಮಾಮ್ ಸಾವು…

ಮದುವೆಗೆ ನಿಖಾಃ ಒದಿಸಲು ಬಂದಿದ್ದ ಇಮಾಮ್ ಹೃದಯಾಘಾತದಿಂದ ಸಾವು.
ಧಾರವಾಡ: ಮದುವೆಗೆ ನಿಖಾಃ ಓದಿಸಲು ಬಂದಿದ್ದ ಇಮಾಮ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಧಾರವಾಡ ನಗರದ ಮಾಳಾಪೂರನಲ್ಲಿರುವ ಮದುವೆ ಮಂಟಪದಲ್ಲಿ ನಡೆದಿದೆ.
ಪೀರ ಪಾಷಾ ಪೀರಜಾದೆ ಎಂಬ ಇಮಾಮ್ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ದೈವಿ.
ಧಾರವಾಡ ನಗರದ ಜಯನಗರ ಮಸ್ಜಿದಿಯ ಇಮಾಮ್ ಆಗಿದ್ದ ಪೀರಜಾದೆ, ಹತ್ತಿಕೊಳ್ಳ ನಿವಾಸಿಯಾಗಿದ್ದರು.
ಮದುಮಕ್ಕಳಿಗೆ ಮದುವೆ ನಿಖಾಃ ಓದಿಸಲು ಮದುವೆ ಹಾಲ್ ಗೆ ಹೋಗಿದ್ದ ಇವರಿಗೆ, ಅಲ್ಲೇ ಹೃದಯಾಘಾತವಾಗಿದೆ. ಈ ವೇಳೆ ಸ್ತಳದಲ್ಲಿದ್ದ ಜನರು ಆಸ್ಪತ್ರೆಗೆ ಇವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ರಸ್ತೆ ಮದ್ಯದಲ್ಲೇ ಇವರು ಸಾವನ್ನಪ್ಪಿದ್ದಾರೆ.