ವೈಧ್ಯರ ಕೈಯಲ್ಲಿ ಚಪ್ಪಲಿ.. ಎದುರಿಗೆ ಪೊಲೀಸರು.. ಧಾರವಾಡದಲ್ಲಿ ನಡೆಯುತ್ತಿರುವುದೇನು….!
1 min readಧಾರವಾಡ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಒಂದೊಳ್ಳೆಯ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿದಿನವೂ ಪೊಲೀಸರು ಪಡುತ್ತಿರುವ ಸಮಸ್ಯೆಯನ್ನ ಎದುರಿಸಲು ಪೊಲೀಸರಿಗೆ ಮಾಹಿತಿಯನ್ನ ಖ್ಯಾತ ವೈಧ್ಯರಿಂದ ನೀಡಲಾಗುತ್ತಿದೆ.
ಹೌದು.. ಧಾರವಾಡ ಶಹರ ಠಾಣೆಯ ಹಿಂದಿರುವ ಸಭಾಂಗಣದಲ್ಲಿ ಡಯಾಬಿಟಿಕ್ ಪ್ರುಟ್ ಸರ್ಜನ ಡಾ.ಸುನೀಲ ಕರಿಯವರಿಂದ, ಪೊಲೀಸರ ಪಾದದ ರಕ್ಷಣೆಯ ಕುರಿತು ಮಾಹಿತಿಯನ್ನ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ದಿನ ಸಂಚರಿಸುವುದರಿಂದ ಪಾದಗಳಿಗೆ ಏನೇಲ್ಲ ತೊಂದರೆಗಳು ಆಗುತ್ತವೆ ಎಂಬುದನ್ನ ಡಾ. ಸುನೀಲ ಅವರು ಕೈಯಲ್ಲಿ ಚಪ್ಪಲಿಯನ್ನ ಹಿಡಿದುಕೊಂಡು ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಬಸಸರಗಿ ಭಾಗವಹಿಸಿ, ವೈಧ್ಯರು ಇಂತಹ ಕಾರ್ಯಕ್ರಮ ಮಾಡಲು ಮುಂದೆ ಬಂದಿರುವುದಕ್ಕೆ ಧನ್ಯವಾದ ತಿಳಿಸಿ, ಸಿಬ್ಬಂದಿಗಳು ಆರೋಗ್ಯವನ್ನ ಕಾಪಾಡಿಕೊಂಡು ಕರ್ತವ್ಯ ನಿರ್ವಹಣೆ ಮಾಡಬೇಕೆಂದು ಸಲಹೆ ನೀಡಿದರು.
ಉಪನಗರ ಠಾಣೆ ಇನ್ಸಪೆಕ್ಟರ್ ಯಲಿಗಾರ ಕಾರ್ಯಕ್ರಮ ನಡೆಸಿಕೊಟ್ಟರು. ಎಸಿಪಿ ಜೆ.ಅನುಷಾ, ಸಂಚಾರಿ ಠಾಣೆ ಇನ್ಸಪೆಕ್ಟರ್ ನಾಯ್ಕರ ಸೇರಿದಂತೆ ಇನ್ನುಳಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿ, ಪಾದದ ರಕ್ಷಣೆಯನ್ನ ಹೇಗೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಅರಿತುಕೊಂಡರು.