Posts Slider

Karnataka Voice

Latest Kannada News

ಅಂಬೇಡ್ಕರ ಸ್ವಾತಂತ್ರ್ಯ ತಂದುಕೊಟ್ಟಿಲ್ಲವೆಂದ ಮುಖ್ಯ ಶಿಕ್ಷಕ ಅಮಾನತ್ತು: ಆಗಸ್ಟ್ 15ರಂದೇ  ಮಾಸ್ತರ್ ಹೀಗೇಕೆ ಮಾಡಿದ್ರೋ..?

1 min read
Spread the love

ವಿಜಯಪುರ: ಸ್ವಾತಂತ್ರತ್ಯೋತ್ಸವದ ದಿನದಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರವರ ಭಾವಚಿತ್ರವನ್ನ ಇಡೋದಕ್ಕೆ ಸರಕಾರದ ಆದೇಶವಿಲ್ಲ.ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನೂ ಮಾಡಿಲ್ಲವೆಂದು ಹೇಳಿದ್ದ ಮುಖ್ಯ ಶಿಕ್ಷಕರನ್ನ ಅಮಾನತ್ತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

ಸಿಂದಗಿ ತಾಲೂಕಿನ ಮುಖ್ಯಶಿಕ್ಷಕ ಕೆ.ಬಿ.ಎಸ್.ಮಾಡಬಾಳರ ಬಳಿ ಗ್ರಾಮಸ್ಥರು ಹೋಗಿ ಡಾ.ಅಂಬೇಡ್ಕರವರ ಭಾವಚಿತ್ರವನ್ನ ಯಾಕೆಯಿಟ್ಟಿಲ್ಲದೆಂದು ಪ್ರಶ್ನಿಸಿದಾಗ ಸಂವಿಧಾನ ಶಿಲ್ಪಿಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಮುಖ್ಯಶಿಕ್ಷಕರು ಮಾತನಾಡಿದ ವೀಡಿಯೋ ವೈರಲ್ ಆಗಿದ್ದೇ ತಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ವರದಿ ತರಸಿಕೊಂಡ ಡಿಡಿಪಿಐ ಮುಖ್ಯಶಿಕ್ಷಕರನ್ನ ಅಮಾನತ್ತು ಮಾಡಿದ್ದಾರೆ.

ಸಮಾಜದ ಏಳಿಗೆಗೆ ಸತತ ಜೀವನವನ್ನ ಸವೆಸಿದ ಮಹಾನ್ ವ್ಯಕ್ತಿಯ ಬಗ್ಗೆ ಶಿಕ್ಷಕ ಮಹಾಶಯರೇ ಇಂತಹ ಮಾತುಗಳನ್ನಾಡಿದ್ದು ಖೇದಕರ ಸಂಗತಿಯಾಗಿದೆ.


Spread the love

Leave a Reply

Your email address will not be published. Required fields are marked *