ಸರಕಾರಿ ಶಾಲೆಯ ಮುಖ್ಯಶಿಕ್ಷಕಿಯನ್ನ “ಮನೆಯಲ್ಲೇ ಕೊಂದ ಕಿರಾತಕರು”- ಕ್ವಾಮಣಗಿ ಫೀಸ್… ಫೀಸ್…!!! Video

ಒಂದು ದಿನ ಮೊದಲೇ ಕೊಲೆ ನಡೆದಿತ್ತಾ
ಸಂಶಯಕ್ಕೆ ಕಾರಣವಾಗಿರೋ ದೃಶ್ಯಾವಳಿಗಳು
ಗಜೇಂದ್ರಗಡ: ಕಳೆದ ಒಂದೇ ವರ್ಷದಲ್ಲಿ ಮೂರು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಿದ್ದ ಮುಖ್ಯಶಿಕ್ಷಕಿಯನ್ನ ಆಕೆಯ ಮನೆಯ ಅಡುಗೆ ಮನೆಯಲ್ಲಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಗಜೇಂದ್ರಗಡ ಪಟ್ಟಣದ ನವನಗರದಲ್ಲಿ ಸಂಭವಿಸಿದೆ.
ಅನ್ನಪೂರ್ಣ ರಾಠೋಡ ಎಂಬ ಮುಖ್ಯ ಶಿಕ್ಷಕಿಯ ಕೊಲೆಯಾಗಿದೆ. ಜೋಳದ ರೊಟ್ಟಿ ಮಾಡುವ ಕ್ವಾಮಣಿಗೆಯಿಂದ ತಲೆಗೆ ಹೊಡೆದಿದ್ದು, ಮಣೆ ತುಂಡು ತುಂಡಾಗಿದೆ.
ವೀಡಿಯೋ…
ಶನಿವಾರ ಹತ್ಯೆಯಾಗಿರುವ ಶಂಕೆಯಿದೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಮುಖ್ಯ ಶಿಕ್ಷಕಿ ಮೊದಲು ಗಜೇಂದ್ರಗಡ ಪಟ್ಟಣದ ಶಾಲೆಯಲ್ಲಿದ್ದರು, ಅಲ್ಲಿಂದ ಲಕ್ಕಲಕಟ್ಟಿ ಶಾಲೆಗೆ ತೆರಳಿದ್ದರು. ಮತ್ತೆ ಅಲ್ಲಿಂದ ಬಿಇಓ ಕಚೇರಿಗೆ ವರ್ಗಾಯಿಸಿಕೊಂಡಿದ್ದರು ಎಂಬ ಮಾಹಿತಿಯಿದೆ.