Posts Slider

Karnataka Voice

Latest Kannada News

ವಿದ್ಯಾಗಮದಲ್ಲಿ ಭಾಗಿಯಾದ ಶಿಕ್ಷಕ-ಕೊರೋನಾದಿಂದ ಸಾವು

1 min read
Spread the love

ಚಿಕ್ಕಮಗಳೂರು: ಯಾವತ್ತೂ ಅನಾರೋಗ್ಯದಿಂದ ಬಳಲದ ಹಾಗೂ ನಿರಂತರವಾಗಿ ವಿದ್ಯಾಗಮ ಯೋಜನೆಯಲ್ಲಿ ತಮ್ಮನ್ನ ತಾವೂ ತೊಡಗಿಸಿಕೊಂಡಿದ್ದ ಶಿಕ್ಷಕರೋರ್ವರು ಕೊರೋನಾ ಪಾಸಿಟಿವ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಬೇಲೂರಿನ ಅನುಘಟ್ಟ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಶಿಕಾಂತ ಬಿ.ಎಂ ಅವರೇ ಮೃತಪಟ್ಟ ಶಿಕ್ಷಕರಾಗಿದ್ದಾರೆ. ಚಿಕ್ಕಮಗಳೂರಿನಿಂದ ಸುಮಾರು 40 ಕಿಲೋಮೀಟರ್ ಪ್ರಯಾಣ ಮಾಡಿ ವಿದ್ಯಾಗಮ ಕಾರ್ಯಕ್ರಮದ ಶಾಲಾ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಶಶಿಕಾಂತರು,  ಕೋವಿಡ್-19ಗೆ ಬಲಿಯಾಗಿದ್ದಾರೆ.

ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಶಿಕಾಂತ ಅವರು ಆರೋಗ್ಯ ಯಾವತ್ತೂ ಕೆಟ್ಟಿದ್ದಿಲ್ಲ. ಯಾವುದೇ ಕಾರಣಕ್ಕೂ ಶಾಲೆಯಿಂದ ದೂರವುಳಿದವರೂ ಅಲ್ಲ. ಅಂಥವರಿಗೆ ಈ ಕೊರೋನಾ ಅಂಟಿಕೊಂಡು ಜೀವವನ್ನ ಪಡೆದಿರುವುದು ಶಿಕ್ಷಕ ವಲಯದಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.

ಪ್ರತಿದಿನವೂ 40 ಕಿಲೋಮೀಟರ್ ಸಂಚರಿಸಿ, ವಿದ್ಯಾಗಮ ಯೋಜನೆಯಲ್ಲಿ ಮಕ್ಕಳೊಂದಿಗೆ ಮತ್ತು ಗ್ರಾಮಸ್ಥರೊಂದಿಗೆ ಬೆರೆತ ಸಮಯದಲ್ಲಿ ಕೊರೋನಾ ಅಂಟಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಶಶಿಕಾಂತ ಅವರ ಸಾವು ಶಿಕ್ಷಕ ಕುಟುಂಬಗಳಲ್ಲೂ ಮತ್ತಷ್ಟು ಭಯವನ್ನ ಮೂಡಿಸಿದೆ.

ಯಾವುದೇ ರೋಗವೂ ಇಲ್ಲದ ಶಶಿಕಾಂತ ಅವರೇ ಈ ರೋಗದಿಂದ ಸಾವಗೀಡಾಗುತ್ತಾರೆ ಎಂದರೇ, ಇನ್ನುಳಿದವರ ಪಾಡೇನು. ನಮ್ಮ ಕುಟುಂಬದ ಸ್ಥಿತಿ ಏನು ಆಗಬೇಕೆಂದು ಶಿಕ್ಷಕ ಸಮೂಹ ಪ್ರಶ್ನಿಸುವಂತಾಗಿದೆ.


Spread the love

Leave a Reply

Your email address will not be published. Required fields are marked *