Posts Slider

Karnataka Voice

Latest Kannada News

ಹುಬ್ಬಳ್ಳಿ”ಕನ್ವಿನ್ಸ್ HC ಗೋವಿಂದಪ್ಪನವರ” ಠಾಣೆಯಲ್ಲೇ ಗೂಂಡಾಗಿರಿ: ಪೊಲೀಸ್ ಸ್ಥಿತಿ ಗಂಭೀರ …

Spread the love

ಹುಬ್ಬಳ್ಳಿ: ತನ್ನ ಮೇಲಾಧಿಕಾರಿಗೆ ಹಗಲಿರುಳು ಅವರಿವರ ಕಡೆಯಿಂದ ಹಣವೆಬ್ಬಿಸಿ ‘ಎದೆಯುಬ್ಬಿಸಿ’ ಮೆರೆಯುವ ಹವಾಲ್ದಾರವೊಬ್ಬ ತನ್ನದೇ ಠಾಣೆಯ ಪೊಲೀಸ್ ನನ್ನ ಹೆಲ್ಮೇಟ್ ನಿಂದ ಹೊಡೆದು ಮಾರಣಾಂತಿಕವಾಗಿ ಗಾಯಗೊಳಿಸಿದ ಘಟನೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಯಾದಗಿರಿ ಮೂಲದ ಪೊಲೀಸ್ ಸಿದ್ಧಪ್ಪ ಎಂಬುವವರ ಬೀಟ್ ಡ್ಯೂಟಿಯಿತ್ತು. ಈ ಸಮಯದಲ್ಲಿ ಎಸ್ ಎಚ್ ಓ ಆಗಿದ್ದ ಪ್ರಕಾಶ ಗೋವಿಂದಪ್ಪನವರ ಎಂಬ 2002 ಬ್ಯಾಚಿನ ಹೆಡ್ ಕಾನ್ಸ್ ಟೇಬಲ್ ತಡವಾಗಿ ಬಂದ ಸಿದ್ದಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ.

ಠಾಣೆಯಲ್ಲಿ ಬಡಿದಾಡಿ ತದನಂತರ ಠಾಣೆಯ ಹಿಂಭಾಗಕ್ಕೆ ಎಳೆದುಕೊಂಡು ಹೋಗಿ ಹಲ್ಲೆ ಮಾಡಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಸಿದ್ದಪ್ಪನನ್ನ ಕಿಮ್ಸಗೆ ದಾಖಲು ಮಾಡಲಾಗಿದೆ.

ಶಹರ ಠಾಣೆ ಇನ್ಸಪೆಕ್ಟರ್ ಆನಂದ ಒಣಕುದರಿಯವರ ಆದೇಶದ ಪ್ರಕಾರ ಗೂಂಡಾಗಿರಿ ಮಾಡಿರುವ ಪ್ರಕಾಶ ಗೋವಿಂದಪ್ಪನವರ ಹಣ ವಸೂಲಿ (ಕನ್ವಿನ್ಸ್) ಮಾಡುತ್ತಿದ್ದನೆಂದು ತಿಳಿದು ಬಂದಿದ್ದು, ಅದೇ ಧಿಮಾಕಿನಿಂದ ಸಿದ್ದಪ್ಪ ಮೇಲೆ ಹಲ್ಲೆ ಮಾಡಿದ್ದಾನೆಂದು ಶಹರ ಠಾಣೆಯ ಇನ್ಸಪೆಕ್ಟರ್ ಒಣಕುದರಿಯವರ ಗೋಡೆಗಳು ಚಿತ್ಕರಿಸುತ್ತಿವೆಯಂತೆ.


Spread the love

Leave a Reply

Your email address will not be published. Required fields are marked *