DCP ರಾಜೀವ ಅವರ ಬದಲಿಗೆ IPS ಕುಶಾಲ್ ಚೌಕ್ಷೆ- 557 Rank ಪಡೆದಿದ್ದ ಅಧಿಕಾರಿಯ ಬಗ್ಗೆ ನಿಮಗಿಷ್ಟು ತಿಳಿದಿರಲಿ…

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಕಮೀಷನರೇಟ್ನ ಡಿಸಿಪಿ ರಾಜೀವ ಅವರನ್ನ ಅಮಾನತ್ತು ಮಾಡಿದ ಕೆಲವೇ ಗಂಟೆಗಳಲ್ಲಿ ರಾಜ್ಯ ಸರಕಾರ ಹೊಸ ಡಿಸಿಪಿಯನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮೂಲತಃ ಭೋಪಾಲ್ನ ಕುಶಾಲ್ ಚೌಕ್ಷೆ ಅವರದ್ದು 2018ನೇ ಬ್ಯಾಚ್. ಅವರು ಕರ್ನಾಟಕಕ್ಕೆ ಬಂದಿದ್ದು 2020ನೇ ಇಸ್ವಿಯಲ್ಲಿ. ಭೋಪಾಲ್ನ ಮೌಲಾನಾ ಆಜಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಭ್ಯಾಸ ಮಾಡಿದ್ದಾರೆ.
ಮಧ್ಯಪ್ರದೇಶ ಭೋಪಾಲ್ ಜಿಲ್ಲೆಯ ಜಬಲಪುರದವರಾದ ಇವರು 557ನೇ ರ್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗಿದ್ದು, ಓಬಿಸಿ ಕೆಟಗೇರಿಯವರಾಗಿದ್ದಾರೆ.