ಹುಬ್ಬಳ್ಳಿಯ ಹವಾಲ್ದಾರ್ ಸಾವು: ಆಘಾತಕ್ಕೋಳಗಾದ ಕುಟುಂಬಸ್ಥರು
ಧಾರವಾಡ: ನಿರಂತರವಾಗಿ ಸೇವೆ ಸಲ್ಲಿಸುತ್ತಲೇ ಅನಾರೋಗ್ಯಕ್ಕೆ ಒಳಗಾದ ಕಮರಿಪೇಟೆ ಹವಾಲ್ದಾರ್ ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೊರೋನಾ ಸಮಯದಲ್ಲಿ ಕರ್ತವ್ಯದಲ್ಲಿದ್ದ ಕಮರಿಪೇಟೆ ಪೊಲೀಸ್ ಠಾಣೆಯ ಹವಾಲ್ದಾರ್ ಹನುಮಾನಸಿಂಗ್ ಅವರೇ ಮೃತರಾಗಿದ್ದಾರೆ. ಕೆಲ ದಿನಗಳ ಹಿಂದಿನಿಂದಲೂ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹನುಮಾನಸಿಂಗ್, ಇಂದು ಬೆಳಗಿನ ಜಾವ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಇಂಥಹ ಸಮಯದಲ್ಲಿ ಹವಾಲ್ದಾರ್ ನಿಧನರಾಗಿದ್ದು, ಇಲಾಖೆಯಲ್ಲಿ ಅನೇಕರಿಗೆ ಬೇಸರ ಮೂಡಿಸಿದೆ.