Posts Slider

Karnataka Voice

Latest Kannada News

ಬಾಲ ನ್ಯಾಯ ಮಂಡಳಿಗೆ ಹಿರಿಯ ವಕೀಲ ಸಂಜೀವ ಬಡಸ್ಕರ ನೇಮಕ: ಹುಬ್ಬಳ್ಳಿಗೆ ಒಲಿದ ಮಹತ್ವದ ಹುದ್ದೆ

1 min read
Spread the love

ಹುಬ್ಬಳ್ಳಿ: ಕರ್ನಾಟಕ ಸರಕಾರ ಬಾಲ ನ್ಯಾಯ ಮಂಡಳಿಯ ರಾಜ್ಯ ಮಟ್ಟದ ಸಮಿತಿಗೆ ಹಿರಿಯ ವಕೀಲರಾದ ಸಂಜೀವ ಬಡಸ್ಕರ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಈ ಮೂಲಕ ಹುಬ್ಬಳ್ಳಿಗೆ ಮಹತ್ವದ ಹುದ್ದೆಯನ್ನ ನೀಡಿದಂತಾಗಿದೆ.

ಮೂರು ವರ್ಷದ ಅವಧಿಗೆ ನೇಮಕಾತಿ ನಡೆದಿದ್ದು ಅಧ್ಯಕ್ಷರಾಗಿ ಜಸ್ಟೀಸ್ ಕೆ.ಎನ್.ಫಣೀಂದ್ರರನ್ನ ನೇಮಕ ಮಾಡಲಾಗಿದೆ. ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮಗಳು-2016, ನಿಯಮ 87ರನ್ವಯ ಬಾಲ ನ್ಯಾಯ ಮಂಡಳಿಗೆ ನೇಮಕ ಮಾಡಲಾಗಿದೆ.

ಹಿರಿಯ ವಕೀಲರಾಗಿರುವ ಸಂಜೀವ ಬಡಸ್ಕರ ಅವರ ನೇಮಕ ಈ ಭಾಗದಲ್ಲಿ ಹೊಸ ಭರವಸೆಯನ್ನ ಮೂಡಿಸಿದೆ. ಸದಾಕಾಲ ನ್ಯಾಯದ ಪರವಾಗಿ ಕಾರ್ಯನಿರ್ವಹಿಸುತ್ತ ಮಾನವೀಯ ಕಾಳಜಿ ಹೊಂದಿರುವ ಬಡಸ್ಕರ್, ಅವರಿಗೆ ಈ ಹುದ್ದೆ ಸೂಕ್ತವಾಗಿದ್ದು, ಅಚ್ಚುಕಟ್ಟಾಗಿ ನಿರ್ವಹಿಸಲಿದ್ದಾರೆ.


Spread the love

Leave a Reply

Your email address will not be published. Required fields are marked *